ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಮತ್ತು ಸ್ನೇಹಿತರು ಸೋಮವಾರ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಭೇಟಿಯಾದರು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಜಯಲಕ್ಷ್ಮಿ ಜೈಲು ಬಳಿಗೆ ಬಂದರು. ಅವರೊಂದಿಗೆ ಅನುಷಾ ಶೆಟ್ಟಿ ಮತ್ತು ಗ್ರೇಸ್ ಮರ್ಸಿ ಎಂಬುವವರು ಇದ್ದರು. ಅದಕ್ಕೂ ಮೊದಲೇ ಸುಶಾಂತ್ ನಾಯ್ಡು ಹಾಗೂ ಇಬ್ಬರು ಜೈಲು ಬಳಿಗೆ ಬಂದಿದ್ದರು.
ಎರಡು ಬ್ಯಾಗ್ಗಳೊಂದಿಗೆ ಜೈಲಿನ ಒಳಗೆ ತೆರಳಿದ ವಿಜಯಲಕ್ಷ್ಮಿ, ದರ್ಶನ್ಗೆ ನೀಡಿ ಸುಮಾರು ಅರ್ಧ ಗಂಟೆ ಬಳಿಕ ಹೊರ ಬಂದರು.
ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದ್ದು, ಕುತೂಹಲ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.