ADVERTISEMENT

ಆಹಾರ ಅರಿಸಿ ಬಂದು ಕಾಡಂಚಿನ ಕಾಳನಾಯಕನಹಳ್ಳಿಯಲ್ಲಿ ಬೀಡುಬಿಟ್ಟ ಕಾಡಾನೆ ಹಿಂಡು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 10:03 IST
Last Updated 13 ಅಕ್ಟೋಬರ್ 2024, 10:03 IST
   

ಆನೇಕಲ್: ಆಹಾರ ಹುಡುಕಿಕೊಂಡು ಶನಿವಾರ ರಾತ್ರಿ ಬಂದಿರುವ ಕಾಡಾನೆ ಹಿಂಡು, ತಾಲ್ಲೂಕಿನ ಕಾಳನಾಯಕನಹಳ್ಳಿಯ ನೀಲಗಿರಿ ತೋಪಿನಲ್ಲಿ ಬಿಡು ಬಿಟ್ಟಿವೆ.

ಗುಂಪಿನಲ್ಲಿ ಐದು ಆನೆಗಳಿವೆ. ಭಾನುವಾರ ಬೆಳಗ್ಗೆ ವಿಷಯ ತಿಳಿದ ಗ್ರಾಮಸ್ಥರು ಆನೆಗಳನ್ನು ನೋಡಲು ನೀಲಗಿರಿ ತೋಪಿನ ಬಳಿ ಜಮಾಯಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದಾರೆ.

ADVERTISEMENT

ಸದ್ಯ ಜನರ ಓಡಾಟ ಇದೆ. ಈಗ ಕಾರ್ಯಾಚರಣೆ ಆರಂಭಿಸಿದರೆ ಆನೆಗಳು ರಸ್ತೆ ಮತ್ತು ವಸತಿ ಪ್ರದೇಶಕ್ಕೆ ನುಗ್ಗಬಹುದು. ಸಂಜೆಯಾದ ನಂತರ ಕಾರ್ಯಾಚರಣೆ ನಡೆಸಲಾಗುವುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.