ADVERTISEMENT

ಹಿರೇಬಾಗೇವಾಡಿ | ಗೋಡೆ ಕುಸಿದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 14:08 IST
Last Updated 2 ಜನವರಿ 2024, 14:08 IST

ಹಿರೇಬಾಗೇವಾಡಿ: ಗೋಡೆ ಕುಸಿದ ಪರಿಣಾಮ ಬಡಾಲ ಅಂಕಲಗಿ ಗ್ರಾಮದ ಜನತಾ ಪ್ಲಾಟ ನಿವಾಸಿ ಚನ್ನಪ್ಪ ಮಾಯಪ್ಪ ಕುರುಬರ(55) ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಜರುಗಿದೆ.

ಕಿರಾಣಿ ಅಂಗಡಿಗೆ ಎಲೆ, ಅಡಿಕೆ ತರಲು ಹೋದಾಗ ಮಾರ್ಗ ಮಧ್ಯೆ ಬಸಪ್ಪ ಯಲ್ಲಪ್ಪ ಅರ್ಜುನವಾಡಿ ಇವರ ಮನೆಯ ಗೋಡೆ ಕುಸಿದ ಬಿದ್ದಿದ್ದರಿಂದ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಹಿರೇಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT