ADVERTISEMENT

ಬೆಳಗಾವಿ | ಸೈಕಲ್‌ ಮೇಲೆ ತೆರಳಿ, ಸಮಸ್ಯೆ ಆಲಿಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 15:19 IST
Last Updated 23 ಜೂನ್ 2024, 15:19 IST
ಬೆಳಗಾವಿಯ ರಾಣಿ ಚನ್ನಮ್ಮನ ನಗರಕ್ಕೆ ಶಾಸಕ ಅಭಯ ಪಾಟೀಲ ಭಾನುವಾರ ಸೈಕಲ್‌ ಮೇಲೆ ತೆರಳಿ, ಜನರ ಕುಂದುಕೊರತೆ ಆಲಿಸಿದರು
ಬೆಳಗಾವಿಯ ರಾಣಿ ಚನ್ನಮ್ಮನ ನಗರಕ್ಕೆ ಶಾಸಕ ಅಭಯ ಪಾಟೀಲ ಭಾನುವಾರ ಸೈಕಲ್‌ ಮೇಲೆ ತೆರಳಿ, ಜನರ ಕುಂದುಕೊರತೆ ಆಲಿಸಿದರು   

ಬೆಳಗಾವಿ: ಇಲ್ಲಿನ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಗೆ ಭಾನುವಾರ ಸೈಕಲ್ ಮೇಲೆ ತೆರಳಿ ಜನರ ಕುಂದುಕೊರತೆ ಆಲಿಸಿದರು.

ರಾಣಿ ಚನ್ನಮ್ಮನ ನಗರ, ರಾಘವೇಂದ್ರ ಕಾಲೊನಿ, ಟಿಳಕವಾಡಿಯ ಗುರುವಾರ ಪೇಟೆ, ಚಿದಂಬರ ನಗರ, ಶಾಸ್ತ್ರಿ ನಗರಕ್ಕೆ ತೆರಳಿದ ಅವರು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

‘ಸ್ಮಾರ್ಟ್‌ಸಿಟಿ ಯೋಜನೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಜನರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಸೂಚಿಸಿದರು.

ADVERTISEMENT

ಉಪಮೇಯರ್‌ ಆನಂದ ಚವ್ಹಾಣ, ಪಾಲಿಕೆಯ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.