ADVERTISEMENT

ಹಂದಿಗುಂದ | ಬಸ್ ಪಲ್ಟಿ: ಆರು ಜನರಿಗೆ ಗಂಭೀರ ಗಾಯ  

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 14:31 IST
Last Updated 16 ಅಕ್ಟೋಬರ್ 2024, 14:31 IST
ಹಂದಿಗುಂದ ಸಮೀಪದ ಕಪ್ಪಲಗುದ್ದಿ ಕ್ರಾಸ್‌ನಲ್ಲಿ ರಸ್ತೆಬದಿ ಸಾರಿಗೆ ಸಂಸ್ಥೆಯ ಬಸ್‌ ಪಲ್ಟಿಯಾಗಿದೆ
ಹಂದಿಗುಂದ ಸಮೀಪದ ಕಪ್ಪಲಗುದ್ದಿ ಕ್ರಾಸ್‌ನಲ್ಲಿ ರಸ್ತೆಬದಿ ಸಾರಿಗೆ ಸಂಸ್ಥೆಯ ಬಸ್‌ ಪಲ್ಟಿಯಾಗಿದೆ   

ಹಂದಿಗುಂದ: ಸಮೀಪದ ಕಪ್ಪಲಗುದ್ದಿ ಕ್ರಾಸ್‌ನಲ್ಲಿ ಮುಧೋಳ-ನಿಪ್ಪಾಣಿ ಹೆದ್ದಾರಿ ಬಳಿ ಸಾರಿಗೆ ಸಂಸ್ಥೆಯ ಬಸ್‌ ಪಲ್ಟಿಯಾದ ಪರಿಣಾಮ, ಚಾಲಕ, ನಿರ್ವಾಹಕ ಸೇರಿ  ಆರು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಭವಿಸಿದೆ.

ಈ ಬಸ್‌ನಲ್ಲಿ 51 ಜನರು ಪ್ರಯಾಣಿಸುತ್ತಿದ್ದರು. ಆದರೆ, ಎದುರಿನಿಂದ ವೇಗವಾಗಿ ಬಂದ ಲಾರಿ ತಪ್ಪಿಸಲು ಹೋದಾಗ, ವಿಜಯಪುರ–ಗೋಕಾಕ ಮಾರ್ಗದ ಬಸ್‌ ರಸ್ತೆಬದಿ ಪಲ್ಟಿಯಾಗಿದೆ. ಮೂಡಲಗಿ, ಮಹಾಲಿಂಗಪುರ, ಗೋಕಾಕ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾರೂಗೇರಿ ಠಾಣೆ ಪೊಲೀಸರು, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.