ಐಗಳಿ: ‘ಬಿಜೆಪಿ ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ ದೇಶಕ್ಕೆ ಏನು ಮಾಡಿಲ್ಲ. ಸುಳ್ಳಿನ ಮೇಲೆ ಸುಳ್ಳು ಹೇಳುತ್ತಲೇ ಕಾಲ ಕಳೆದರು. ಅವರು ಅಧಿಕಾರದಲ್ಲಿದ್ದಾಗ ನೀಡಿದ ಕೊಡುಗೆ ಏನೆಂದು ಆತ್ಮಾವಲೋಕನ ಮಾಡಿಕೊಂಡು, ಮತ ಚಲಾಯಿಸಬೇಕು’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ಸತ್ತಿ, ಮಹಿಷವಾಡಗಿ, ಸವದಿ, ಸವದಿದರ್ಗಾ, ಜನವಾಡ, ನಂದೇಶ್ವರ ಹಾಗೂ ರಡ್ಡೇರಹಟ್ಟಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಮತಯಾಚನೆ ನಡೆಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣೆ ವೇಳೆ ಮತದಾರರಿಗೆ ಕೊಟ್ಟ ಐದು ಗ್ಯಾರಂಟಿಗಳ ಭರವಸೆಯನ್ನು ಅನುಷ್ಠಾನಕ್ಕೆ ತಂದಿದೆ. ಈಗ ಬಡ ಕುಟುಂಬದ ಜನರಿಗೆ ಈ ಯೋಜನೆಗಳು ಆಸರೆಯಾಗಿವೆ. ದೇಶಕ್ಕೆ ಈಗ ಕರ್ನಾಟಕ ಮಾದರಿಯ ಕಾಂಗ್ರೆಸ್ ಸರ್ಕಾರ, ಕೇಂದ್ರದಲ್ಲೂ ರಚನೆಯಾದರೆ ಗ್ಯಾರಂಟಿಗಳೂ ಅನುಷ್ಠಾನಕ್ಕೆ ಬರಲಿವೆ’ ಎಂದರು.
ಉದ್ಯಮಿ ಸದಾಶಿವ ಬುಟಾಳಿ, ಕೆಪಿಸಿಸಿ ಸದಸ್ಯ ಚಿದಾನಂದ ಮುಕಣಿ, ವಕೀಲ ಧರೆಪ್ಪ ಠಕ್ಕಣ್ಣವರ, ಸುಶೀಲಕುಮಾರ ಪತ್ತಾರ ಮಾತನಾಡಿದರು. ಬಿ.ಬಿ. ಬಿಸಲಾಪುರ, ಮಹಾದೇವ ಗಲಗಲಿ, ಕೆಎಂಎಫ್ ನಿರ್ದೇಶಕ ಮಹಾದೇವ ಬಿಳಿಕುರಿ, ಶ್ರೀಶೈಲ ಗಸ್ತಿ, ಮಲ್ಲಪ್ಪ ಅವಟಿ, ವಿವೇಕ ಯಲಗುದ್ದರಿ, ಮುರಗೇಪ್ಪ ಬಾವಿ, ಅಶೋಕ ಸನಾಳ, ಶ್ರೀಶೈಲ ದುಲಾರಿ, ಬಸಗೊಂಡ ಮುಗ್ಗನವರ, ಮೋಹನ ದೊಡಮನಿ, ಜಡೆಪ್ಪ ಕುಂಬಾರ, ರಾಹುಲ ಮಾಚಕನೂರ, ಅಶೋಕ ಚಿಟೆ, ಮಲ್ಲಪ್ಪ ಬ್ಯಾಳಿಗೌಡರ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.