ಐಗಳಿ: ಗ್ರಾಮದಲ್ಲಿ ಗುರುವಾರ ರೈತ ಮುಬಾರಕ್ ಬಾಸುಸಾಬ್ ನದಾಫ ಅವರ ವಾಸದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಸಂಪೂರ್ಣ ಭಸ್ಮವಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಶಹಜಹಾನ ದೊಂಗರಗಾಂವ, ‘ರೈತನ ಮನೆಯಲ್ಲಿದ್ದ ಕಾಳು, ಬಟ್ಟೆ, ಗೃಹೋಪಯೋಗಿ ವಸ್ತುಗಳು ಸೇರಿ ₹4 ಲಕ್ಷ ದಷ್ಟು ಹಾನಿಯಾಗಿದೆ. ತಕ್ಷಣ ಅವರಿಗೆ ಸರ್ಕಾರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ರಾಜಶ್ರೀ ಶಂ. ಪಾಟೀಲ ಹಾಗೂ ಪಿಡಿಒ ರಾಜೇಂದ್ರ ಪಾಠಕ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.