ADVERTISEMENT

ಇಂದು ಜಾನಪದ ಪರಿಷತ ಸಂಸ್ಥಾಪನಾ ದಿನಾಚರಣೆ 

​ಪ್ರಜಾವಾಣಿ ವಾರ್ತೆ
Published 30 ಜೂನ್ 2023, 17:02 IST
Last Updated 30 ಜೂನ್ 2023, 17:02 IST

undefined

ಮೂಡಲಗಿ: ಇಲ್ಲಿಯ ಚೈತನ್ಯ ಗ್ರೂಪ್‌, ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಕನ್ನಡ ಜಾನಪದ ಪರಿಷತ್ತು ಆಶ್ರಯದಲ್ಲಿ ಜು.1ರಂದು ಮಧ್ಯಾಹ್ನ 3.30ಕ್ಕೆ ಸಂಸ್ಥಾಪನಾ ಚಿನಾಚರಣೆ ಹಾಗೂ ವಿವಿಧ ಜಾನಪದ ಕಾರ್ಯಕ್ರಮಗಳನ್ನು ಚೈತನ್ಯ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾನ್ನಿಧ್ಯವನ್ನು ಬೀರನಹೊಳಿಯ ಚಿದಾನಂದ ಸ್ವಾಮೀಜಿವಹಿಸುವರು. ಕಿರುತೆರೆ ಕಲಾವಿದೆ ಮಾಲತಿಶ್ರೀ ಮೈಸೂರ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ. ಲಕ್ಷ್ಮಣ ಚೌರಿ ಅಧ್ಯಕ್ಷತೆವಹಿಸುವರು. ಪ್ರೊ. ಎಂ.ಬಿ. ಬಳಿಗಾರ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಬಾಲಶೇಖರ ಬಂದಿ, ಅಶೋಕ ಲಗಮಪ್ಪಗೋಳ, ಈಶ್ವರಚಂದ್ರ ಬೆಟಗೇರಿ, ರುಕ್ಮವ್ವ ಹೊರಟ್ಟಿ, ವೈ.ಬಿ. ಪಾಟೀಲ, ಶಂಕರ ಕ್ಯಾಸ್ತಿ ಭಾಗವಹಿಸುವರು. ಕಲಾವಿದರಿಗೆ ಸನ್ಮಾನ ಮತ್ತು ಜಾನಪದ ಕಲಾ ವೈಭವ ಇರುವುದು ಎಂದು ಅಧ್ಯಕ್ಷರಾದ ಜಯಾನಂದ ಮಾದರ ಮತ್ತು ಡಾ. ಮಹಾದೇವ ಪೋತರಾಜ ತಿಳಿಸಿದ್ದಾರೆ.

ADVERTISEMENT
undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.