ADVERTISEMENT

ಬೆಳಗಾವಿ | ಇಬ್ಬರು ಮಕ್ಕಳೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 13:21 IST
Last Updated 29 ಸೆಪ್ಟೆಂಬರ್ 2024, 13:21 IST
<div class="paragraphs"><p>ಯಲ್ಲವ್ವ&nbsp;ಅರ್ಜುನ ಕರಿಹೊಳೆ</p></div>

ಯಲ್ಲವ್ವ ಅರ್ಜುನ ಕರಿಹೊಳೆ

   

ರಾಯಬಾಗ(ಬೆಳಗಾವಿ): ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ಯಲ್ಲವ್ವ ಅರ್ಜುನ ಕರಿಹೊಳೆ(30), ಅವರ ಮಕ್ಕಳಾದ ಸ್ವಾತಿ(5), ಮುತ್ತಪ್ಪ(1) ಮೃತರು.

ADVERTISEMENT

‘ಪತಿ ಅರ್ಜುನ ಅವರೊಂದಿಗೆ ಯಲ್ಲವ್ವ ಭಾನುವಾರ ಬೆಳಿಗ್ಗೆ ಜಗಳವಾಡಿದ್ದರು. ಪತಿ ಕೃಷಿಭೂಮಿಯತ್ತ ತೆರಳಿದ ನಂತರ, ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಶಂಕೆ: ಆರೋಪ

‘ನನ್ನ ಮಗು ಯಲ್ಲವ್ವಳ ಪತಿ ವಿಪರೀತ ಮದ್ಯ ವ್ಯಸನಿಯಾಗಿದ್ದ. ವರದಕ್ಷಿಣೆ ತರುವಂತೆ ಆಗಾಗ ಪೀಡಿಸುತ್ತಿದ್ದ. ಹಾಗಾಗಿ ಆತನೇ ಕೊಲೆ ಮಾಡಿ, ಬಾವಿಯಲ್ಲಿ ಬಿಸಾಕಿರುವ ಶಂಕೆ ಇದೆ’ ಎಂದು ತಾಯಿ ಶೋಭಾ ಹಾಲಗೊಂಡ ಅವರು, ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.