ಸಂಕೇಶ್ವರ: ಸಂಕೇಶ್ವರದಿಂದ ಮಹಾರಾಷ್ಟ್ರದ ಹಿಟ್ನಿ ಕ್ರಾಸ್ಗೆ ಇರುವ ದೂರ ಕೇವಲ 3 ಕಿ.ಮೀ (ಒಂದು ಸ್ಟೇಜ್) ಮಾತ್ರ. ಆದರೆ ಸಂಕೇಶ್ವರದಿಂದ ಇಲ್ಲಿಗೆ ಬರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ಸುಗಳು ಮಾತ್ರ ₹10 ರೂಪಾಯಿ ಪ್ರಯಾಣ ದರ ವಿಧಿಸುತ್ತವೆ. ಆದರೆ ಅದೇ ಮಹಾರಾಷ್ಟ್ರದಿಂದ ಸಂಚರಿಸುವ ಮಹಾರಾಷ್ಟ್ರ ಬಸ್ಸುಗಳು ಕೇವಲ 5 ರೂಪಾಯಿ ಪ್ರಯಾಣ ದರ ವಿಧಿಸುತ್ತವೆ. ಇದರಿಂದ ಗಡಿ ಭಾಗದಿಂದ ಸಂಕೇಶ್ವರಕ್ಕೆ ನಿತ್ಯವೂ ಬರುವ ಪ್ರಯಾಣಿಕರಿಗೆ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗುತ್ತಿದೆ.
ಇದರಿಂದ ಕೆಲವು ಪ್ರಯಾಣಿಕರು ಕರ್ನಾಟಕ ಬಸ್ಗಳಲ್ಲಿ ಸಂಚರಿಸದೇ ಮಹಾರಾಷ್ಟ್ರದ ಬಸ್ಗಳಲ್ಲಿಯೇ ಹೆಚ್ಚಿನ ಪ್ರಯಾಣ ಮಾಡುತ್ತಿದ್ದಾರೆ.ಈ ತಾರತಮ್ಯವನ್ನು ಸರಿಪಡಿಸಲಾಗುವುದೇ?
–ಕೆ.ಎಂ.ಪಾಟೀಲ್, ನಿಲ್ಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.