ADVERTISEMENT

ನಿಪ್ಪಾಣಿ: ಇಸ್ರೋ ವಿಜ್ಞಾನಿ ಚಿದಾನಂದ ಮಗದುಮಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 14:15 IST
Last Updated 28 ಆಗಸ್ಟ್ 2023, 14:15 IST
ಇಸ್ರೋ ವಿಜ್ಞಾನಿ ಚಿದಾನಂದ ಮಗದುಮ ಅವರನ್ನು ನಿಪ್ಪಾಣಿ ತಾಲ್ಲೂಕಿನ ಆಡಿ ಗ್ರಾಮದಲ್ಲಿ ಶಿವಾನಂದ ಸ್ವಾಮೀಜಿ ಸತ್ಕರಿಸಿದರು
ಇಸ್ರೋ ವಿಜ್ಞಾನಿ ಚಿದಾನಂದ ಮಗದುಮ ಅವರನ್ನು ನಿಪ್ಪಾಣಿ ತಾಲ್ಲೂಕಿನ ಆಡಿ ಗ್ರಾಮದಲ್ಲಿ ಶಿವಾನಂದ ಸ್ವಾಮೀಜಿ ಸತ್ಕರಿಸಿದರು   

ನಿಪ್ಪಾಣಿ:  ಇಸ್ರೋ ವಿಜ್ಞಾನಿ ಮತ್ತು ತಾಲ್ಲೂಕಿನ ಆಡಿ ಗ್ರಾಮದ ನಿವಾಸಿ ಚಿದಾನಂದ ಮಗದುಮ ಅವರನ್ನು ತಾಲ್ಲೂಕಿನ ಆಡಿಯಲ್ಲಿ ಗಿರಿಮಠದ ಶಿವಾನಂದ ಸ್ವಾಮೀಜಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಚಂದ್ರಯಾನ-3 ಮಿಷನ್ ಬಗ್ಗೆ ವಿವರವಾದ ಮಾಹಿತಿ ನೀಡಿದ ಮಗದುಮ ಅವರು, ಈ ಮಿಷನ್‍ನ ಭಾಗವಾದ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೇ ಎಂದರು.

 ಹಿರಿಯ ಮುಖಂಡ ಮಲಗೌಡ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಪಾಟೀಲ, ಸುಭಾಷ ಮಗದುಮ, ತಾತ್ಯಾಸಾಹೇಬ ಪಾಟೀಲ, ಮಲಗೌಡ ಕಮತೆ, ಶಿವಗೌಡ ಪಾಟೀಲ ಸೇರಿದಂತೆ ಮಗದುಮ ಕುಟುಂಬದವರು ಹಾಗೂ ಗ್ರಾಮಸ್ಥರು  ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.