ADVERTISEMENT

ರಾಷ್ಟ್ರೀಯ ಪ್ರಶಸ್ತಿಗೆ ಛತ್ತೀಸಗಡದ ತೀಜನ್‌ಬಾಯಿ ಆಯ್ಕೆ

ಎಚ್‌.ಎಲ್‌.ನಾಗೇಗೌಡ ಜನ್ಮಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2015, 19:31 IST
Last Updated 13 ಫೆಬ್ರುವರಿ 2015, 19:31 IST

ಬೆಂಗಳೂರು: ‘ಜಾನಪದ ಸಂಶೋಧಕ ಡಾ.ಎಚ್‌.ಎಲ್‌. ನಾಗೇಗೌಡ ಅವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸ­ಲಾಗಿದ್ದು, ಮೊದಲ ಪ್ರಶಸ್ತಿಗೆ ಛತ್ತೀಸ­ಗಡದ ಪಂಡ್ವಾನಿ ಕಲಾವಿದೆ ತೀಜನ್‌­ಬಾಯಿ ಅವರನ್ನು ಆಯ್ಕೆ ಮಾಡಲಾ­ಗಿದೆ’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಅವರು ಮಾಹಿತಿ ನೀಡಿದರು.

ಶುಕ್ರವಾರ ಪತ್ರಿಕಾ­­ಗೋಷ್ಠಿ­ಯಲ್ಲಿ ಮಾತ­ನಾಡಿದ ಅವರು, ನಾಗೇ­ಗೌಡ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ಇದೇ 14 ಮತ್ತು 15ರಂದು ಮಲ್ಲತ್ತಹಳ್ಳಿಯ ಕಲಾಗ್ರಾಮ­ದಲ್ಲಿ ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸ­ಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.