ಬೆಂಗಳೂರು: ‘ಸ್ನೇಹಿತನ ಜೊತೆ ಸಲುಗೆ ಇಟ್ಟುಕೊಂಡಿರುವ ನನ್ನ ಪತ್ನಿ, ಸುಖಾಸುಮ್ಮನೇ ಜಗಳ ತೆಗೆದು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದಾಳೆ’ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಜಗಜೀವನ್ರಾಮ್ ನಗರ ಠಾಣೆಗೆ ದೂರು ನೀಡಿದ್ದಾರೆ.
‘ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ವ್ಯಕ್ತಿ ದೂರು ನೀಡಿದ್ದಾರೆ. ಪತ್ನಿ ಹಾಗೂ ಅವರ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರ ಹಾಗೂ ಮಹಿಳೆ, 2013ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಜಗಳದಿಂದಾಗಿ ದಂಪತಿ ವಿಚ್ಛೇಧನ ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದರ ಬೆನ್ನಲ್ಲೇ, ಮಹಿಳೆ ಸ್ನೇಹಿತನ ಹೊತೆ ಸೇರಿಕೊಂಡು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿರುವುದಾಗಿ ದೂರುದಾರ ಆರೋಪಿಸುತ್ತಿದ್ದಾರೆ’ ಎಂದು ತಿಳಿಸಿವೆ.
‘ಮಹಿಳೆಯ ಸ್ನೇಹಿತ, ಸಿಗರೇಟ್ನಿಂದ ಮಕ್ಕಳ ದೇಹಕ್ಕೆ ಸುಟ್ಟಿರುವ ಆರೋಪವಿದೆ. ಇದೊಂದು ಕೌಟುಂಬಿಕ ಗಲಾಟೆ. ಹೀಗಾಗಿ, ಸೂಕ್ತ ಪುರಾವೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.