ಚಿತ್ತೀ ಮಳಿ ತತ್ತೀ ಹಾಕುತಿತ್ತು ಸ್ವಾತಿ ಮುತ್ತಿನೊಳಗ ಅಂತ ಬೇಂದ್ರೆ ಅಜ್ಜಾರು ಹಾಡ್ಯಾರ. ಹಂಗೆ ಈ ಹಿಂಗಾರು ಮಳಿಯೊಳಗ ಚಿತ್ತೀಮಳಿ ಮೋಡ ಇದ್ದಲ್ಲಷ್ಟೇ ಸುರಿಯುವುದು. ಗಾಳಿಗೆ ಬೀಸುವುದಿಲ್ಲ. ಸುರಿದಲ್ಲೆಲ್ಲ ಗುಂಡಿ ಮಾಡುವ ಚಿತ್ತಾಮಳೆಯ ಗುಣದಿಂದ ಬೆಂಗಳೂರೆಂಬೋ ಬೆಂಗಳೂರು ಹೈರಾಣಾಯ್ತು. ಮಲೆನಾಡಿನ ಕಾಡುಗಳಲ್ಲಿ ಅಣಬೆಗಳಂತೆ ಬಣ್ಣಬಣ್ಣದ ಛತ್ರಿ ಹಿಡಿದು ಜನರು ಹೊರಬಂದರು. ಕೊಳೆಯೆಲ್ಲ ತೊಳೆದೊಯ್ದ ಮಳೆ ಇದು ಎಂದು ಮಹಾನಗರಪಾಲಿಕೆಯವರು ದೊಡ್ಡದೊಡ್ಡಕಾಲುವೆಯಲ್ಲಿ ಹರಿದು ಬಂದ ಬಟ್ಟೆಗಳನ್ನೆಲ್ಲ ತೆಗೆದು, ನೀರಿಗೆ ದಾರಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.