ಬೆಂಗಳೂರು: ಮಹದೇವಪುರ ವಲಯ ದಲ್ಲಿ ಬಾಗಮನೆ, ಪುರ್ವ ಪ್ಯಾರಡೈಸ್, ಪ್ರೆಸ್ಟೀಜ್, ಸಲಾರ್ಪುರಿಯಾ, ಆದರ್ಶ, ನಲಪಾಡ್, ನ್ಯೂ ಹೊರೈಜನ್ ಕಾಲೇಜು, ಕೊಲಂಬಿಯಾ ಆಸ್ಪತ್ರೆ, ಗೋಪಾಲನ್ ಸಂಸ್ಥೆಗಳಿಗೆ ರಾಜಕಾಲುವೆ ಒತ್ತುವರಿಗೆ ಆ.3ನೇ ವಾರದಲ್ಲೇ ನೋಟಿಸ್ ನೀಡ ಲಾಗಿತ್ತು. ಆದರೆ, ಸೆಪ್ಟೆಂಬರ್ ಮೊದಲ ವಾರ ಮಳೆಯಿಂದ ಅವಾಂತರ ವಾದ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ.
ಮಹದೇವಪುರ ವಲಯ ಆಯುಕ್ತರ ಸೂಚನೆ ಮೇರೆಗೆ ರಾಜಕಾಲುವೆ ವಿಭಾ ಗದ ಎಂಜಿನಿಯರ್ಗಳು 15 ಒತ್ತುವರಿ ದಾರರ ಹೆಸರು, ಗ್ರಾಮ, ಸರ್ವೆ ನಂಬರ್ಗಳ ಸಹಿತ ಮಾಹಿತಿಯನ್ನು ಆಗಸ್ಟ್ 17ರಂದೇ ಜಂಟಿ ಆಯುಕ್ತರಿಗೆ ಸಲ್ಲಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.