ADVERTISEMENT

ಡಿ.ಎ.ಶಂಕರ್, ಶಂಕರ್ ಸಿಹಿಮೊಗ್ಗೆಗೆ ‘ಶಾ.ಬಾಲುರಾವ್ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:19 IST
Last Updated 19 ಅಕ್ಟೋಬರ್ 2024, 15:19 IST
ಡಿ.ಎ. ಶಂಕರ್
ಡಿ.ಎ. ಶಂಕರ್   

ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನ ನೀಡುವ ‘ಶಾ. ಬಾಲೂರಾವ್ ಅನುವಾದ ಪ್ರಶಸ್ತಿ’ಗೆ ಅನುವಾದಕ ಡಿ.ಎ. ಶಂಕರ್ ಅವರ ‘ಡಾಕ್ಟರ್ ಫಾಸ್ಟರ್ಸ್’ ನಾಟಕ ಹಾಗೂ ‘ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ’ಗೆ ಯುವ ಬರಹಗಾರ ಶಂಕರ್ ಸಿಹಿಮೊಗ್ಗೆ ಅವರ ‘ಇರುವೆ ಮತ್ತು ಗೋಡೆ’ ಕವನ ಸಂಕಲನ ಆಯ್ಕೆಯಾಗಿವೆ. 

ಈ ಪ‍್ರಶಸ್ತಿಗಳು ತಲಾ ₹ 25 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿವೆ. 2023ರಲ್ಲಿ ಮೊದಲ ಮುದ್ರಣಗೊಂಡ ಕೃತಿಗಳನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಇದೇ 26ರಂದು ಎನ್.ಆರ್. ಕಾಲೊನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ‍ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ADVERTISEMENT
ಶಂಕರ್ ಸಿಹಿಮೊಗ್ಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.