ADVERTISEMENT

ಬಿಎಂಟಿಸಿ: ಅನುಕಂಪ ಆಧಾರಿತ ನೇಮಕಾತಿ ಆದೇಶ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 18:34 IST
Last Updated 22 ಜುಲೈ 2024, 18:34 IST
ಬಿಎಂಟಿಸಿಯ ಮೃತ ನೌಕರರ ಅವಲಂಬಿತರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಅಧಿಕಾರಿಗಳು  ಸೋಮವಾರ ನೇಮಕಾತಿ ಆದೇಶ ವಿತರಿಸಿದರು
ಬಿಎಂಟಿಸಿಯ ಮೃತ ನೌಕರರ ಅವಲಂಬಿತರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಅಧಿಕಾರಿಗಳು  ಸೋಮವಾರ ನೇಮಕಾತಿ ಆದೇಶ ವಿತರಿಸಿದರು   

ಬೆಂಗಳೂರು: ಸೇವಾವಧಿಯಲ್ಲೇ ಮೃತಪಟ್ಟ ಬಿಎಂಟಿಸಿಯ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಆದೇಶವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ವಿತರಿಸಿದರು.

‘ಅನುಕಂಪದ ಆಧಾರದ ಮೇಲೆ ಉದ್ಯೋಗದ ನಿರೀಕ್ಷಣೆಯಲ್ಲಿದ್ದ ಮೃತರ ಅವಲಂಬಿತರ ಪೈಕಿ 250 ಜನರಿಗೆ ಕಳೆದ ಅಕ್ಟೋಬರ್‌ ಮತ್ತು ಮಾರ್ಚ್‌ನಲ್ಲಿ ದರ್ಜೆ–3 ಮತ್ತು ದರ್ಜೆ 4ರ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ. ಚಾಲಕ, ನಿರ್ವಾಹಕ, ತಾಂತ್ರಿಕ ಹುದ್ದೆಗಳು ಹೆಚ್ಚು ಖಾಲಿ ಇವೆ. ಆದರೆ, ಮೃತರ ಅವಲಂಬಿತರು ಈ ಹುದ್ದೆಗಳ ಬದಲು ಕಿರಿಯ ಸಹಾಯಕ–ಬೆರಳಚ್ಚುಗಾರ ಹುದ್ದೆಗಳನ್ನು ಬಯಸುತ್ತಿದ್ದಾರೆ. ಹಾಗಾಗಿ ಹೆಚ್ಚು ಹುದ್ದೆಗಳನ್ನು ಅನುಕಂಪದ ಆಧಾರದಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಸಚಿವರು ತಿಳಿಸಿದರು.

ಕರ್ನಾಟಕ ರಾಜ್ಯ ಸಾರಿಗೆಯ ಕಾನ್‌ಸ್ಟೆಬಲ್‌, ಸಹಾಯಕ ಮತ್ತು ತಾಂತ್ರಿಕ ಸಹಾಯಕ ಸೇರಿ 48 ಹುದ್ದೆಗಳಿಗೆ ಅನುಕಂಪ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಬಿಎಂಟಿಸಿಯಲ್ಲಿ 2,500 ನಿರ್ವಾಹಕರ ಹುದ್ದೆ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್., ನಿರ್ದೇಶಕಿ (ಮಾಹಿತಿ ತಂತ್ರಜ್ಞಾನ) ಶಿಲ್ಪಾ ಎಂ., ಇಲಾಖಾ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.