ADVERTISEMENT

ದೇಶಿಯ ಕ್ರೀಡೆಗಳಿಗೆ ಒತ್ತು ಅಗತ್ಯ: ರಮೇಶ್

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 16:28 IST
Last Updated 10 ಡಿಸೆಂಬರ್ 2023, 16:28 IST
ಕ್ಯಾಪಿಟಲ್ ಶಾಲೆಯ ಅಧ್ಯಕ್ಷ ರಮೇಶ್ ಅವರು ಶಾಲಾ ಮಕ್ಕಳಿಗೆ ಕ್ರೀಡಾಜ್ಯೋತಿ ನೀಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕ್ಯಾಪಿಟಲ್ ಶಾಲೆಯ ಅಧ್ಯಕ್ಷ ರಮೇಶ್ ಅವರು ಶಾಲಾ ಮಕ್ಕಳಿಗೆ ಕ್ರೀಡಾಜ್ಯೋತಿ ನೀಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.   

ಕೆ.ಆರ್.ಪುರ: ದೇಶಿಯ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಕ್ಯಾಪಿಟಲ್ ಶಾಲೆಯ ಅಧ್ಯಕ್ಷ ರಮೇಶ್ ಹೇಳಿದರು.

ಕೆ.ಆರ್.ಪುರದ ಎ. ನಾರಾಯಣಪುರದ ಕ್ಯಾಪಿಟಲ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕೊಕ್ಕೊ, ಕಬಡ್ಡಿ, ಕುಸ್ತಿ ಸೇರಿದಂತೆ ಹಲವು ದೇಶಿ ಕ್ರೀಡೆಗಳು ಮಕ್ಕಳ ಸದೃಢ ಆರೋಗ್ಯಕ್ಕೆ ಪೂರಕ. ಜೊತೆಗೆ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ ಎಂದರು.

ADVERTISEMENT

ಕಿರಿಯ ವಯಸ್ಸಿನಲ್ಲಿ ಮಾಡುವ ಸಾಧನೆಗಳು ಅವರ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಅದು ಅವರ ಜೀವನದಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ಪ್ರಾಂಶುಪಾಲ ಪ್ರಿಯವಾಸುದೇವನ್ ತಿಳಿಸಿದರು.

ಶಾಲೆಯ ನಿರ್ದೇಶಕಿ ಸುಷ್ಮಾ ರಮೇಶ್, ಪ್ರಾಂಶುಪಾಲ ಪ್ರಿಯ ವಾಸುದೇವನ್, ದೇಹಿಕ ಶಿಕ್ಷಕ ಕಿರಣ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.