ADVERTISEMENT

ದರ್ಶನ್‌ ಅವರನ್ನು ಕೃಷಿ ರಾಯಭಾರಿ ಮಾಡಿದ್ದಾಗ ಪ್ರಕರಣ ಇರಲಿಲ್ಲ: ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 15:23 IST
Last Updated 17 ಜೂನ್ 2024, 15:23 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಹಾವೇರಿ: ‘ನಾನು ಕೃಷಿ‌ ಸಚಿವನಾಗಿದ್ದ ವೇಳೆ ರೈತರಿಗೆ‌ ಮಾದರಿ‌ಯಾಗಲಿ ಮತ್ತು ಮಾರ್ಗದರ್ಶನ ಸಿಗಲಿಯೆಂದು ನಟ ದರ್ಶನ್ ಅವರನ್ನು ಕೃಷಿ ರಾಯಭಾರಿ‌ ಮಾಡಿದ್ದೆ. ಆಗ ಅವರ‌ ಮೇಲೆ ಯಾವುದೇ ‌ಪ್ರಕರಣ ಇರಲಿಲ್ಲ. ದರ್ಶನ್ ನಟಗಾಗಿ ಅಷ್ಟೇ ಗೊತ್ತು. ಅವರ ಬಗ್ಗೆ ಬೇರೆ ಮಾಹಿತಿ ಗೊತ್ತಿಲ್ಲ’ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

‘ಚಿತ್ರದುರ್ಗದ ‌ರೇಣುಕಸ್ವಾಮಿ ಹತ್ಯೆ‌ ಕ್ಷಮಿಸಲಾರದಂತಹ ಹೇಯ‌ಕೃತ್ಯ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ರೇಣುಕಸ್ವಾಮಿ‌ ಕುಟುಂಬಕ್ಕೆ ನ್ಯಾಯ ‌ಸಿಗಬೇಕು' ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಮಹರ್ಷಿ ವಾಲ್ಮೀಕಿ ನಿಗಮದ ₹ 187 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿ, ಆಂಧ್ರಪ್ರದೇಶದ ಚುನಾವಣೆಗೆ ಬಳಸಲಾಗಿದೆ. ಈ ಅಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದ್ದು, ರಾಜೀನಾಮೆ ನೀಡಬೇಕು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.