ADVERTISEMENT

ಬೆಂಗಳೂರು: ಜುಲೈ 13ರಂದು ‘ಗ್ಲಾಸ್ ವೇರ್' ಛಾಯಾಗ್ರಹಣ ಕಮ್ಮಟ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 15:37 IST
Last Updated 17 ಜೂನ್ 2024, 15:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಸಾಗರ ಫೋಟೋಗ್ರಾಫಿಕ್‌ ಸೊಸೈಟಿ’ಯು ‘ನೀನಾಸಂ’ ಸಹಯೋಗದಲ್ಲಿ ಜುಲೈ 13–14ರಂದು ‘ಗ್ಲಾಸ್ ವೇರ್ ಛಾಯಾಗ್ರಹಣ’ ಕಮ್ಮಟವನ್ನು ಹಮ್ಮಿಕೊಂಡಿದೆ.

ಹೆಗ್ಗೋಡಿನ ‘ನೀನಾಸಂ’ ಆವರಣದಲ್ಲಿ ಈ ಕಮ್ಮಟ ನಡೆಯಲಿದೆ. ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ ಬೆಂಗಳೂರಿನ  ಗಿರೀಶ್ ಮಾಯಾಚಾರಿ ಅವರು ಸಂಪನ್ಮೂಲ ತಜ್ಞರಾಗಿರಲಿದ್ದಾರೆ. ನಿಯಮಿತ ಸ್ಥಳಾವಕಾಶವಿದ್ದು, ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ಸಿಗಲಿದೆ ಎಂದು ಸಾಗರ ಫೋಟೋಗ್ರಾಫಿಕ್‌ ಸೊಸೈಟಿಯ ಸಂಚಾಲಕ ಕೆ.ಎಸ್. ರಾಜಾರಾಮ್ ತಿಳಿಸಿದ್ದಾರೆ.

ADVERTISEMENT

ಊಟ- ವಸತಿ ಖರ್ಚಿನ ವಿವರಗಳಿಗೆ- ಜಿ.ಆರ್.ಪಂಡಿತ್ ಅವರ ವಾಟ್ಸ್‌ಆ್ಯಪ್ ಸಂಖ್ಯೆಗೆ 9448627878 ಸಂದೇಶ ಕಳುಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.