ADVERTISEMENT

ಡಾನಾ ಚಂಡಮಾರುತ: ಪುರಿ–ಯಶವಂತಪುರ, ಗುವಾಹಟಿ–ಎಸ್‌ಎಂವಿಟಿ ರೈಲುಗಳ ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:38 IST
Last Updated 24 ಅಕ್ಟೋಬರ್ 2024, 15:38 IST
ಗರೀಬ್‌ ರಥ
ಗರೀಬ್‌ ರಥ   

ಬೆಂಗಳೂರು: ಡಾನಾ ಚಂಡಮಾರುತದ ಕಾರಣಕ್ಕಾಗಿ ಪುರಿ–ಯಶವಂತಪುರ–ಪುರಿ, ಗುವಾಹಟಿ–ಎಸ್‌ಎಂವಿಟಿ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

ಅಕ್ಟೋಬರ್‌ 25ರಂದು ಪುರಿಯಿಂದ ಯಶವಂತಪುರಕ್ಕೆ ಹೊರಡುವ ಗರೀಬ್‌ ರಥ ಸಾಪ್ತಾಹಿಕ ರೈಲು ಅ.26ರಂದು ಯಶವಂತಪುರದಿಂದ ಪುರಿಗೆ ಹೊರಡುವ ಗರೀಬ್‌ ರಥ ಸಾಪ್ತಾಹಿಕ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಅ.27ರಂದು ಗುವಾಹಟಿಯಿಂದ ಬೆಂಗಳೂರು ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಹೊರಡುವ ಟ್ರೈ–ವೀಕ್ಲಿ ರೈಲುಗಳನ್ನು ಪೂರ್ವ ಕರಾವಳಿ ಮತ್ತು ಈಶಾನ್ಯ ಗಡಿ ರೈಲ್ವೆ ವಲಯವು ರದ್ದು ಪಡಿಸಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.