ADVERTISEMENT

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಘದಿಂದ ಏಳು ವೈದ್ಯರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 14:27 IST
Last Updated 12 ಜುಲೈ 2024, 14:27 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ವೈದ್ಯರ ದಿನದ ಪ್ರಯುಕ್ತ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಬೆಂಗಳೂರು ಘಟಕ ನೀಡುವ ಪ್ರಶಸ್ತಿಗೆ ಏಳು ವೈದ್ಯರು ಆಯ್ಕೆಯಾಗಿದ್ದಾರೆ. 

ಡಾ. ವೇಣುಗೋಪಾಲ್ ಕೆ., ಡಾ.ಎ.ಎಸ್. ವೆಂಕಟಾಚಲಪತಿ, ಡಾ.ಟಿ.ಎಸ್. ಚನ್ನಪ್ಪ, ಡಾ.ರೇಖಾ ರಾಜೇಂದ್ರ ಕುಮಾರ್, ಡಾ. ರಮೇಶ್ ಕೃಷ್ಣ ಕೆ., ಡಾ.ವಿ. ನಾರಾಯಣಸ್ವಾಮಿ ಹಾಗೂ ಡಾ. ರಂಗನಾಥ್ ಸಿ.ಎನ್. ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ADVERTISEMENT

ಘಟಕವು ಇದೇ ಶನಿವಾರ ಸಂಜೆ ಸಂಜೆ 6 ಗಂಟೆಗೆ ಲಾ ಮಾರ್ವೆಲ್ಲ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ಮುಖ್ಯ ಅತಿಥಿಯಾಗಿ ಸಂಸದ ಹಾಗೂ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.