ADVERTISEMENT

ಬೆಂಗಳೂರು | ಸಾಂಕ್ರಾಮಿಕ ರೋಗ: ಶಾಲಾ ಮಕ್ಕಳಿಂದ ಜನಜಾಗೃತಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 16:05 IST
Last Updated 12 ಜೂನ್ 2024, 16:05 IST
ಸಾಂಕ್ರಾಮಿಕ ರೋಗಗಳ ಜಾಗೃತಿ ಬಗ್ಗೆ ಶಾಲಾ ಮಕ್ಕಳು ನಾಗರಿಕರಿಗೆ ಕರಪತ್ರ ವಿತರಿಸಿದರು
ಸಾಂಕ್ರಾಮಿಕ ರೋಗಗಳ ಜಾಗೃತಿ ಬಗ್ಗೆ ಶಾಲಾ ಮಕ್ಕಳು ನಾಗರಿಕರಿಗೆ ಕರಪತ್ರ ವಿತರಿಸಿದರು   

ಬೆಂಗಳೂರು: ಸಾಂಕ್ರಾಮಿಕ ರೋಗಗಳಾದ ಡೆಂಗಿ, ಚಿಕೂನ್‌ ಗುನ್ಯಾ, ಮಲೇರಿಯಾ ಬಗ್ಗೆ ಜನರು ಅರಿತು, ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಶಾಲಾ ಮಕ್ಕಳು ಜನಜಾಗೃತಿ ಮೂಡಿಸಿದರು.

ಬಿಬಿಎಂಪಿ ಮಹದೇವಪುರ ವಲಯದ ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬಿ.ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯ ಸಹಯೋಗದೊಂದಿಗೆ ಜನಜಾಗೃತಿ ನಡೆಯಿತು.

ಆಡಳಿತ ವೈದ್ಯಾಧಿಕಾರಿ ಡಾ. ಬಾಬು ಮಹೇಂದ್ರ ಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್‍ ನೇತೃತ್ವದಲ್ಲಿ ಪ್ರೌಢಶಾಲಾ ಮಕ್ಕಳು ಜನ- ಜಾಗೃತಿ-ಜಾಥಾದೊಂದಿಗೆ ಲಾರ್ವಾ ಸಮೀಕ್ಷೆ ಮತ್ತು ನಿರ್ಮೂಲನ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ADVERTISEMENT

ಸುಮಾರು 60 ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು, ತಲಾ 20 ಮನೆಗಳಂತೆ 1,200ಕ್ಕೂ ಹೆಚ್ಚು ಮನೆ‌ಗಳಿಗೆ ಆಶ್ರಿತ ರೋಗವಾಹಕ ರೋಗಗಳ ಕುರಿತ ಕರಪತ್ರಗಳನ್ನು ಹಂಚಿದರು.

ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಶೈಲ್ ಕನ್ನಾಳ್ ಅವರು ಡೆಂಗಿ, ಚಿಕೂನ್‌ ಗುನ್ಯಾ ಕುರಿತಾದ ಆರೋಗ್ಯ ಶಿಕ್ಷಣವನ್ನು ನೀಡಿದರು.

ಆರೋಗ್ಯನಿರೀಕ್ಷಣಾಧಿಕಾರಿಗಳಾದ ಮಂಜುನಾಥ, ಕಿರಣ್, ಶರತ್, ಶಿವಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.