ಬೆಂಗಳೂರು: ರಾಮೇಶ್ವರ, ಕನ್ಯಾಕುಮಾರಿ, ಮದುರೈ, ತಿರುವನಂತಪುರಕ್ಕೆ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆಯು ಜ.18ರಂದು ಆರಂಭಗೊಳ್ಳಲಿದೆ.
ದಕ್ಷಿಣ ಯಾತ್ರಾ ವಿಶೇಷ ರೈಲು ಜ.18ರಂದು ಹೊರಡಲಿದ್ದು, ಜ.23ರಂದು ವಾಪಸ್ಸಾಗಲಿದೆ. ಜ.30ಕ್ಕೆ ಹೊರಡುವ ರೈಲು ಫೆ.4ಕ್ಕೆ ವಾಪಸ್ಸಾಗಲಿದೆ. ಪ್ರವಾಸ ಬಯಸುವವರು ಐಆರ್ಸಿಟಿಸಿ/ಐಟಿಎಂಎಸ್ ವೆಬ್ಸೈಟ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಅತಿ ಕಡಿಮೆ ವೆಚ್ಚದ ಒಂದು ವಾರದ ಯಾತ್ರೆಯು ಇದಾಗಿದ್ದು, ರಾಮೇಶ್ವರ ದೇವಾಲಯ, ಭಗವತಿ ದೇವಾಲಯ, ಮೀನಾಕ್ಷಿ ದೇವಾಲಯ, ಅನಂತಪದ್ಮನಾಭ ದೇವಾಲಯಗಳ ದರ್ಶನ ಪಡೆಯಬಹುದು. ಯಾತ್ರೆಯ ಪ್ಯಾಕೇಜ್ ಮೊತ್ತ ₹ 15,000 ಆಗಿದ್ದು, ಕರ್ನಾಟಕ ಸರ್ಕಾರವು ₹ 5,000 ಸಹಾಯಧನ ನೀಡಲಿದೆ. ಯಾತ್ರಿಗಳು ₹ 10,000 ಪಾವತಿಸಬೇಕು. ಯಾತ್ರೆಯ ವಿಶೇಷ ರೈಲು ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಯಶವಂತಪುರದಲ್ಲಿ ನಿಲುಗಡೆ ನೀಡಲಿದೆ. ಅಲ್ಲಿ ಯಾತ್ರಿಗಳಿಗೆ ಹತ್ತಲು ಮತ್ತು ಇಳಿಯಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.