ADVERTISEMENT

ಶ್ರೀನಿವಾಸ, ನಾಗರಾಜ ರಾವ್‌ಗೆ ಮೈತ್ರೀ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 4:18 IST
Last Updated 20 ಸೆಪ್ಟೆಂಬರ್ 2024, 4:18 IST
 ಶ್ರೀನಿವಾಸ ವರಖೇಡಿ
 ಶ್ರೀನಿವಾಸ ವರಖೇಡಿ   

ಬೆಂಗಳೂರು: ನಗರದ ಮೈತ್ರೀ ಸಂಸ್ಕೃತ–ಸಂಸ್ಕೃತಿ ಪ್ರತಿಷ್ಠಾನ ನೀಡುವ 2024ನೇ ‘ಮೈತ್ರೀ ಪುರಸ್ಕಾರ’ಕ್ಕೆ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಹಾಗೂ ವಿದ್ವಾಂಸ ಡಾ.ಎಚ್‌.ವಿ.ನಾಗರಾಜ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಸ್ಕೃತ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಅಕ್ಟೋಬರ್ 17ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹10 ಸಾವಿರ ನಗದು, ಸ್ಮರಣಿಕೆ ಹಾಗೂ ಗ್ರಂಥಗಳನ್ನು ಒಳಗೊಂಡಿದೆ ಎಂದು ಮೈತ್ರೀ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಎಚ್‌.ವಿ.ನಾಗರಾಜ ರಾವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT