ADVERTISEMENT

ಮೆಟ್ರೊ ಪಿಲ್ಲರ್‌ಗೆ ಗುದ್ದಿದ ಲಾರಿ: ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 22:39 IST
Last Updated 25 ಮಾರ್ಚ್ 2024, 22:39 IST

ಬೆಂಗಳೂರು: ಬಳ್ಳಾರಿ ರಸ್ತೆಯಲ್ಲಿರುವ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ಗೆ ಲಾರಿಯೊಂದು ಗುದ್ದಿ ಅಪಘಾತ ಸಂಭವಿಸಿದ್ದು, ಚಾಲಕ ಸಾಹೀದ್ ಖಾನ್ (40) ಅವರು ಮೃತಪಟ್ಟಿದ್ದಾರೆ.

‘ಮಧ್ಯಪ್ರದೇಶದ ಗ್ವಾಲಿಯರ್‌ನ ಸಾಹೀದ್ ಖಾನ್, ಸರಕು ಸಾಗಣೆಯ ಲಾರಿ ಚಲಾಯಿಸಿಕೊಂಡು ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮೆಟ್ರೊ ನಿರ್ಮಾಣ ಕಾಮಗಾರಿ ನಡೆದಿದೆ. ಮೀನುಕುಂಟೆ ಹೊಸೂರು ಬಳಿ ಮೆಟ್ರೊ ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ಇದೇ ರಸ್ತೆಯಲ್ಲಿ ಲಾರಿ ಹೊರಟಿತ್ತು. ಸಾಹೀದ್ ಖಾನ್, ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿದ್ದರು.’

ADVERTISEMENT

‘ನಿಯಂತ್ರಣ ತಪ್ಪಿದ್ದ ಲಾರಿ, ಪಿಲ್ಲರ್‌ಗೆ ಗುದ್ದಿತ್ತು. ಲಾರಿ ಮುಂಭಾಗ ಸಂಪೂರ್ಣ ಜಖಂಗೊಂಡು, ಚಾಲಕ ಮೃತಪಟ್ಟಿದ್ದಾರೆ. ಕ್ಲೀನರ್‌ ಸಹ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.