ADVERTISEMENT

ಬೆಂಗಳೂರು | ಮೆಟ್ರೊ ಕಾಮಗಾರಿ: ಕುಸಿದ ರಸ್ತೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 15:41 IST
Last Updated 27 ಜೂನ್ 2024, 15:41 IST
ನಾಗವಾರ ಮುಖ್ಯರಸ್ತೆಯ ಗ್ಲಾಸ್‌ ಫ್ಯಾಕ್ಟರಿ ಬಳಿ ನಡೆಯುತ್ತಿರುವ ಮೆಟ್ರೊ ಸುರಂಗ ಕೆಲಸದ ವೇಳೆ ರಸ್ತೆ ಕುಸಿದಿದ್ದು, ಬಳಿಕ ಬಿಎಂಆರ್‌ಸಿಎಲ್‌ ಸಿಬ್ಬಂದಿ ಗುಂಡಿಯನ್ನು ಮುಚ್ಚಿದರು
ನಾಗವಾರ ಮುಖ್ಯರಸ್ತೆಯ ಗ್ಲಾಸ್‌ ಫ್ಯಾಕ್ಟರಿ ಬಳಿ ನಡೆಯುತ್ತಿರುವ ಮೆಟ್ರೊ ಸುರಂಗ ಕೆಲಸದ ವೇಳೆ ರಸ್ತೆ ಕುಸಿದಿದ್ದು, ಬಳಿಕ ಬಿಎಂಆರ್‌ಸಿಎಲ್‌ ಸಿಬ್ಬಂದಿ ಗುಂಡಿಯನ್ನು ಮುಚ್ಚಿದರು   

ಬೆಂಗಳೂರು: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಕೆ.ಜಿ. ಹಳ್ಳಿ ಮತ್ತು ನಾಗವಾರ ನಡುವಿನ ‘ತುಂಗಾ’ ಸುರಂಗ ಕೊರೆಯುವ ಸಂದರ್ಭ ಗುರುವಾರ ರಸ್ತೆಯಲ್ಲಿ ಹೊಂಡ ಬಿದ್ದಿದೆ.

ಬೆಳಿಗ್ಗೆ 8.30ರ ಸಮಯದಲ್ಲಿ ರಸ್ತೆ ಕುಸಿದು ಮಧ್ಯೆ ಹೊಂಡ ಸೃಷ್ಟಿಯಾಯಿತು. ವಾಹನಗಳ ಸಂಚಾರಕ್ಕೆ ತೊಡಕು ಉಂಟಾಯಿತು.

ಬಿಎಂಆರ್‌ಸಿಎಲ್‌ ಸಿಬ್ಬಂದಿ ಕಾಂಕ್ರೀಟ್‌ ಹಾಕಿ ಹೊಂಡ ಮುಚ್ಚಿದರು. ತಾತ್ಕಾಲಿಕವಾಗಿ ಈ ರಸ್ತೆಯಲ್ಲಿ ಒಂದು ಕಡೆಯಿಂದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.