ಕೆಂಗೇರಿ: ಕೆರೆಯಂಗಳದಲ್ಲಿ ನಾಪತ್ತೆಯಾಗಿದ್ದ ಇಬ್ಬರ ಪೈಕಿ ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಕೆಂಗೇರಿ ಬಳಿಯ ಹರ್ಷ ಲೇಔಟ್ ನಿವಾಸಿಯಾದ ಜಯಮ್ಮ ಎಂಬುವರ ಮಕ್ಕಳಾದ ಜಾನ್ಸನ್( 15) ಹಾಗೂ ಮಹಾಲಕ್ಚ್ಮಿ(13) ಎಂಬುವರು ಸೋಮವಾರ ಸಂಜೆ ಕೆಂಗೇರಿ ಕೆರೆ ಅಂಗಳಕ್ಕೆ ತೆರಳಿದ್ದರು. ಈ ವೇಳೆ ಸಹೋದರ ಜಾನ್ಸನ್ ಕಾಲು ಜಾರಿ ಕೆರೆಗೆ ಬಿದ್ದರು, ಅವರನ್ನು ಹಿಡಿಯಲು ಪ್ರಯತ್ನಿಸಿದ ಸಹೋದರಿ ಕೂಡ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದ್ದು ಮೃತ ಜಾನ್ಸನ್ ಶವ ಕೆರೆಯಲ್ಲಿ ಪತ್ತೆಯಾಗಿದೆ.
ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿರುವ ಮೃತರ ತಾಯಿ ಜಯಮ್ಮ, ತಮಿಳುನಾಡು ಮೂಲದವರಾಗಿದ್ದು, ಇತ್ತೀಚೆಗಷ್ಟೇ ಕೆಂಗೇರಿ ಸಮೀಪದ ಹರ್ಷ ಲೇಔಟ್ ಗೆ ಬಂದು ನೆಲೆಸಿದ್ದರು. ಕೆಲಸದ ನಿಮಿತ್ತ ತಾಯಿ ಹೊರ ಹೋಗಿದ್ದಾಗ ಕೆರೆ ಬಳಿಗೆ ಬಂದಿದ್ದ ಮಕ್ಕಳು, ಕಾಲು ಜಾರಿ ಕೆರೆಗೆ ಬಿದ್ದಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಸೋಮವಾರ ಸಂಜೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸಂಜೆಯಿಂದಲೇ ಮಕ್ಕಳವಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಮಳೆ ಕಾರಣ ರಾತ್ರಿಯ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.
ಮಂಗಳವಾರ ಮುಂಜಾನೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿಗೆ 11:30 ವೇಳೆಗೆ ಜಾನ್ಸನ್ ಶವ ಪತ್ತೆಯಾಯಿತು. ಬಾಲಕಿ ಮಹಾಲಕ್ಷ್ಮಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಮುಳುಗು ತಜ್ಞರು ಹಾಗೂ ಬೋರ್ವೆಲ್ನಲ್ಲಿ ಬಳಸುವ ಕ್ಯಾಮರಾ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕೆಂಗೇರಿ ಸಿಪಿಐ ಸಂಜೀವ್ ಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.