ADVERTISEMENT

ಯಲಹಂಕ | ವಿಶ್ವನಾಥ್‌ ಹುಟ್ಟುಹಬ್ಬ: ಸಮಾಜಮುಖಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 16:24 IST
Last Updated 25 ಜುಲೈ 2024, 16:24 IST
ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು, ಯಲಹಂಕದ ಹೊನ್ನೇನಹಳ್ಳಿ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಪತ್ನಿ ವಾಣಿಶ್ರೀ ವಿಶ್ವನಾಥ್‌, ಪುತ್ರ ಅಲೋಕ್‌ ವಿಶ್ವನಾಥ್‌, ಪುತ್ರಿ ಅಪೂರ್ವ, ಭಾವಿ ಅಳಿಯ ಸಂಜಯ್‌ (ಸಚಿವ ಬೈರತಿ ಸುರೇಶ್‌ ಅವರ ಪುತ್ರ) ಮತ್ತಿತರರು ಇದ್ದರು. 
ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು, ಯಲಹಂಕದ ಹೊನ್ನೇನಹಳ್ಳಿ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಪತ್ನಿ ವಾಣಿಶ್ರೀ ವಿಶ್ವನಾಥ್‌, ಪುತ್ರ ಅಲೋಕ್‌ ವಿಶ್ವನಾಥ್‌, ಪುತ್ರಿ ಅಪೂರ್ವ, ಭಾವಿ ಅಳಿಯ ಸಂಜಯ್‌ (ಸಚಿವ ಬೈರತಿ ಸುರೇಶ್‌ ಅವರ ಪುತ್ರ) ಮತ್ತಿತರರು ಇದ್ದರು.    

ಯಲಹಂಕ: ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊನ್ನೇನಹಳ್ಳಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 

ಪೌರಕಾರ್ಮಿಕರಿಗೆ ಜರ್ಕಿನ್ ವಿತರಣೆ, ಆರೋಗ್ಯ ಮತ್ತು ನೇತ್ರಾ ತಪಾಸಣೆ, ರಕ್ತದಾನ ಶಿಬಿರ, ಅಗತ್ಯವಿರುವವರಿಗೆ ಶಸ್ತ್ರಚಿಕಿತ್ಸೆಗೆ ನೆರವು, ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ, ನೋಟ್‌ ಪುಸ್ತಕ ಹಾಗೂ ಶೂ ವಿತರಣೆ, ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ 94ಸಿಸಿ ಅಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ನಡೆಯಿತು. ಬಡ ಮಹಿಳೆಯರಿಗೆ ಸಹಾಯಧನ ಮತ್ತು ವಿವಿಧ ಸವಲತ್ತುಗಳನ್ನೂ ವಿತರಿಸಲಾಯಿತು.

ವಿಶ್ವವಾಣಿ ಫೌಂಡೇಶನ್‌, ಬಿಜೆಪಿ ಯುವ ಮೋರ್ಚಾ, ಪರಿಶಿಷ್ಟ ಜಾತಿ ಮೋರ್ಚಾ, ಬಿಜೆಪಿ ಯಲಹಂಕ ನಗರ ಹಾಗೂ ಗ್ರಾಮಾಂತರ ಮಂಡಲ ಸಮಿತಿಗಳ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 462 ಯೂನಿಟ್‌ ರಕ್ತ ಸಂಗ್ರಹಿಸಲಾಯಿತು.

ADVERTISEMENT

ವಿಶ್ವನಾಥ್‌ ಮಾತನಾಡಿ, ‘ಜನ್ಮದಿನದ ನೆಪದಲ್ಲಿ ಹಲವಾರು ಸಮಜಮುಖಿ ಕಾರ್ಯಗಳನ್ನು ಆಯೋಜಿಸುವ ಮೂಲಕ ಬಡಜನರ ಸೇವೆ ಮಾಡಲು ಅವಕಾಶ ದೊರೆತಿರುವುದು ಸಂತಸ ತಂದಿದೆ’ ಎಂದರು.

ಸಿಂಗನಾಯನಹಳ್ಳಿ ರೈತರ ಸೇವಾ ಸಹಕಾರ ಬ್ಯಾಂಕ್‌ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್‌, ಪಾಲಿಕೆ ಮಾಜಿ ಸದಸ್ಯರಾದ ಎಂ.ಸತೀಶ್‌, ಎಂ.ಮುನಿರಾಜು, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್‌.ಎನ್‌.ರಾಜಣ್ಣ, ಎಚ್‌.ಬಿ.ಹನುಮಯ್ಯ, ಚೊಕ್ಕನಹಳ್ಳಿ ವೆಂಕಟೇಶ್‌, ಸತೀಶ್‌ ಕಡತನಮಲೆ, ಎಸ್‌.ಜಿ.ನರಸಿಂಹಮೂರ್ತಿ, ಟಿ. ಮುನಿರೆಡ್ಡಿ, ಎಸ್‌.ಜಿ.ಪ್ರಶಾಂತ್‌ ರೆಡ್ಡಿ, ಅದ್ದೆ ವಿಶ್ವನಾಥಪುರ ಮಂಜುನಾಥ್‌, ಎಂ.ಮೋಹನ್‌ಕುಮಾರ್‌, ಎಚ್‌.ಸಿ.ರಾಜೇಶ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.