ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳ ಏಡ್ಸ್ ಪ್ರತಿಬಂಧಕ ಘಟಕಗಳಿಗೆ ‘ಮೊಬೈಲ್ ಐಸಿಟಿಸಿ ವ್ಯಾನ್’ಗಳನ್ನು ಬುಧವಾರ ನೀಡಲಾಯಿತು. ಜೊತೆಗೆ ಎಲ್ಲ ಜಿಲ್ಲೆಗಳಿಗೆ ಒಂದರಂತೆ ದ್ವಿಚಕ್ರವಾಹನ ವಿತರಿಸಲಾಯಿತು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಹನಗಳಿಗೆ ಚಾಲನೆ ನೀಡಿದರು. ಈ ವ್ಯಾನ್ ತಾತ್ಕಾಲಿಕ ಕ್ಲಿನಿಕ್ ಹೊಂದಿದ್ದು, ಎಚ್ಐವಿ ಪೀಡಿತರಿಗಾಗಿ ಬಳಕೆಯಾಗಲಿದೆ. ಐಸಿಟಿಸಿ ವ್ಯಾನ್ನಲ್ಲಿ ನಿಯಮಿತ ಆರೋಗ್ಯ ತಪಾಸಣೆ ನಡೆಸಬಹುದು. ಸಂತಾನೋತ್ಪತ್ತಿ ಸೋಂಕಿನ ಸಿಂಡ್ರೊಮಿಕ್ ಚಿಕಿತ್ಸೆ, ಪ್ರಸವಪೂರ್ವ ಆರೈಕೆಗೆ ಅವಶ್ಯವಿರುವ ಸೇವೆ ಒದಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ದುರ್ಗಮ ಪ್ರದೇಶಗಳಿಗೆ ಈ ವಾಹನ ತಲುಪಲಿದೆ. ಜೈಲು ಕೈದಿಗಳಿಗೂ ಐಸಿಟಿಸಿ ವ್ಯಾನ್ನಲ್ಲಿ ಚಿಕಿತ್ಸೆ ನೀಡಬಹುದು. ಎಚ್ಐವಿ/ಎಸ್ಟಿಐ ಹೆಪಟೈಟಿಸ್-ಬಿ ಮತ್ತು ಸಿ, ಟಿಬಿ ಸೋಂಕು ಹರಡುವ ಸಾಧ್ಯತೆ ಇರುವ ದುರ್ಬಲ ಪ್ರದೇಶಗಳಿಗೆ ಐಸಿಟಿಸಿ ವ್ಯಾನ್ ಸೇವೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.