ಬೆಂಗಳೂರು: ಹಳೇ ದ್ವೇಷದಿಂದ ಎಂ.ಸತೀಶ್ ಕುಮಾರ್ ಎಂಬುವರ ಮೇಲೆ ಸಿಮೆಂಟ್ ಬ್ಲಾಕ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ರೋಡ್ ರಾಮ್ಸಿಂಗ್ ಪೇಟ್ ನಿವಾಸಿ, ಬುಕ್ ಬೈಡಿಂಗ್ ಹಾಗೂ ವಾಹನ ಚಾಲನೆ ಕೆಲಸ ಮಾಡುತ್ತಿದ್ದ ಎಂ.ಶ್ರೀಕಾಂತ್ (38) ಬಂಧಿತ. ‘ಪ್ರಥಮ ಪಿಯುಸಿ ವ್ಯಾಸಂಗ ಮಾಡಿದ್ದ ಆರೋಪಿ, ಬಿಡುವಿನ ವೇಳೆಯಲ್ಲಿ ಬುಕ್ ಬೈಡಿಂಗ್ ಕೆಲಸ ಸಹ ಮಾಡುತ್ತಿದ್ದ’ ಎಂದರು.
‘ಏಪ್ರಿಲ್ 19ರಂದು ರಾತ್ರಿ, ದೊಮ್ಮಲೂರಿನ ಬೀಡಿ ಪಾರ್ಕ್ ಬಳಿ ಈತ ಕೃತ್ಯ ಎಸಗಿದ್ದ. ಮೃತನ ಕುಟುಂಬಸ್ಥರು ದೂರು ನೀಡಿದ್ದರು‘ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.