ADVERTISEMENT

ಬೆಂಗಳೂರು | 21ರಿಂದ ನರಸಿಂಹ ಜಯಂತಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 14 ಮೇ 2024, 16:33 IST
Last Updated 14 ಮೇ 2024, 16:33 IST
ಅಭಯ ಲಕ್ಷ್ಮೀನರಸಿಂಹ
ಅಭಯ ಲಕ್ಷ್ಮೀನರಸಿಂಹ   

ಬೆಂಗಳೂರು; ಬಸವನಗುಡಿಯ ತ್ಯಾಗರಾಜನಗರದ ಅಭಯ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಮೇ 21ರಿಂದ ಮೇ 23ರ ವರೆಗೆ 47ನೇ ವರ್ಷದ ನರಸಿಂಹ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಅಭಯ ಲಕ್ಷ್ಮೀ ನರಸಿಂಹ, ಅಶ್ವಥ ಕುಬೇರ ಲಕ್ಷ್ಮೀನರಸಿಂಹ ಮತ್ತು ಕಂಬದ ನರಸಿಂಹನ ವಜ್ರದ ಆಕಾರದ ಸ್ವರೂಪದಿಂದಾಗಿ ಇಲ್ಲಿಗೆ ವಜ್ರಕ್ಷೇತ್ರ ಎಂಬ ಹೆಸರು ಬಂದಿದೆ. ಮೇ 21ರಂದು ನರಸಿಂಹ ತಾರಕ ಹೋಮ, ವಿವಿಧ ಪೂಜಾ ಕಾರ್ಯಗಳು ನೆರವೇರಲಿವೆ.

ಮೇ 22ರಂದು ಕಲ್ಯಾಣೋತ್ಸವ, ಅಶ್ವತ್ಥ ಕುಬೇರ ಲಕ್ಷ್ಮೀನರಸಿಂಹ ದೇವರಿಗೆ ಮಹಾಭಿಷೇಕ ಹಾಗೂ ನಾಣ್ಯ ಅಭಿಷೇಕ, 23ರಂದು ನರಸಿಂಹ ಸ್ತಂಭಕ್ಕೆ ಮಹಾಭಿಷೇಕ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟಿಗಳಾದ ಅರುಣ್ ಚಿಂತೋಪಂತ್ ಡಿ. ರಮಾಬಾಯಿ, ಎಸ್.ಆರ್. ವಾದಿರಾಜಾಚಾರ್, ಅರ್ಚಕ ನರಹರಿ ಆಚಾರ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.