ಬೆಂಗಳೂರು: ಚಿ.ನ. ಮಂಗಳಾ ನೆನಪಿನ ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಜಯನಗರ ಎನ್.ಎಂ.ಕೆ.ಆರ್.ವಿ. ಮಹಿಳಾ ಕಾಲೇಜಿನ ಕನ್ನಡ ವಿಭಾಗ ‘ಸುರಗಿ’ ಹಮ್ಮಿಕೊಂಡಿದೆ. ಇದಕ್ಕೆ ವಿದ್ಯಾರ್ಥಿಗಳಿಂದ ಕವನ ಆಹ್ವಾನಿಸಲಾಗಿದೆ.
ರಾಜ್ಯದ ಯಾವುದೇ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಒಂದು ಕಾಲೇಜಿನಿಂದ ಐದು ವಿದ್ಯಾರ್ಥಿಗಳು ಕವನ ಕಳುಹಿಸಿಕೊಡಬಹುದು. ಅನುವಾದ, ನಕಲು, ಹೆಸರು ಬದಲಾಯಿಸಿ ಹಾಕಿದ, ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಪ್ರಕಟಗೊಂಡ ಕವನಗಳಿಗೆ ಅವಕಾಶವಿಲ್ಲ. ಕಾಲೇಜಿನ ಮುಖ್ಯಸ್ಥರ/ಪ್ರಾಂಶುಪಾಲರ ಮೊಹರು ಮತ್ತು ಸಹಿ ಇರುವ ಪತ್ರವನ್ನು ಕವನದೊಂದಿಗೆ ಕಳುಹಿಸಬೇಕು. ಕಾಲೇಜಿನ ವಿವರ, ತರಗತಿ, ದೂರವಾಣಿ ಸಂಖ್ಯೆ, ಭಾವಚಿತ್ರದೊಂದಿಗೆ ನ.3ರ ಒಳಗೆ suragikavanaspardhe2024@gmail.comಗೆ ಕಳುಹಿಸುವಂತೆ ಪ್ರಾಂಶುಪಾಲೆ ಸ್ನೇಹಲತಾ ಜಿ. ನಾಡಿಗೇರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.