ಬೆಂಗಳೂರು: ಇಲ್ಲಿನ ಶೇಷಾದ್ರಿಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರೀತಂ ಆರ್.ಪಿ. ಅವರು ದ್ವಿತೀಯ ಪಿ.ಯು.ಸಿ. ಮರುಮೌಲ್ಯಮಾಪನದಲ್ಲಿ 4 ಅಂಕ ಅಧಿಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
595 (ಶೇ 99.17) ಅಂಕ ಗಳಿಸಿದ್ದ ಪ್ರೀತಂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮರುಮೌಲ್ಯಮಾಪನದ ವೇಳೆ ಇಂಗ್ಲಿಷ್ನಲ್ಲಿ ನಾಲ್ಕು ಅಧಿಕ ಅಂಕ ಗಳಿಸಿದ್ದರಿಂದ 599 (ಶೇ 99.83) ಅಂಕ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಜಿ.ಕೆ. ಮಂಜುನಾಥ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.