ADVERTISEMENT

ಬೆಂಗಳೂರು | ಕಬ್ಬು ನುರಿಸುವ ಗಾಡಿ ಕಳ್ಳತನ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 14:25 IST
Last Updated 16 ಮಾರ್ಚ್ 2024, 14:25 IST
-
-   

ಬೆಂಗಳೂರು: ಮೋಟರ್‌ ಚಾಲಿತ ಕಬ್ಬು ನುರಿಸಿ ಹಾಲು ತಯಾರಿಸುವ ಗಾಡಿಯನ್ನು ಕಳವು ಮಾಡಿದ್ದ ಇಬ್ಬರು ಕಳ್ಳರನ್ನು ದಕ್ಷಿಣ ವಿಭಾಗದ ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ಧಾರೆ.

ಅಂಜನಾಪುರ ಆವಲಹಳ್ಳಿಯ ನಿವಾಸಿಗಳಾದ ವಿಜಯಕುಮಾರ್‌ ಹಾಗೂ ಮನ್ಸೂರ್‌ ಪಾಷಾ ಬಂಧಿತ ಆರೋಪಿಗಳು.

ಬಂಧಿತರಿಂದ ₹1 ಲಕ್ಷ ಮೌಲ್ಯದ ಮೋಟರ್‌ ಚಾಲಿತ ಕಬ್ಬು ನುರಿಸುವ ಗಾಡಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಸೈಯದ್ ನಫೀಝ್‌ ಅವರು ನೀಡಿದ ದೂರು ಆಧರಿಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ತಲಘಟ್ಟಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಜನಾಪುರ ಕೆರೆಯ ಬಳಿ ಸೈಯದ್ ನಫೀಝ್‌ ಕಬ್ಬಿನ ಹಾಲು ತಯಾರಿಸಿ, ಮಾರಾಟ ಮಾಡುತ್ತಿದ್ದರು. ಅಲ್ಲಿದ್ದ ಯಂತ್ರವನ್ನು ಮಾರ್ಚ್‌ 2ರಂದು ಇಬ್ಬರು ಕಳವು ಮಾಡಿದ್ದರು. ಕಳವು ಮಾಡಿದ ಯಂತ್ರವನ್ನು ಕಬ್ಬಿಣ ಖರೀದಿಸುವ ವ್ಯಾಪಾರಿಗೆ ಮಾರಾಟ ಮಾಡಿ ₹30 ಸಾವಿರ ಪಡೆದುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.