ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
   

ವಿಶ್ವ ಸಂಗೀತ ದಿನದ ಪ್ರಯುಕ್ತ ಸಂಗೀತ ಕಾರ್ಯಕ್ರಮ: ಬೆಳಿಗ್ಗೆ 6.30ರಿಂದ ‘ಮಾರ್ನಿಂಗ್ ರಾಗ’ ಸಂಗೀತ ಕಛೇರಿ: ಶೃತಿ ಬೋಡೆ, ಯೋಗೀಶ್ ಭಟ್, ವಿಘ್ನೇಶ್ ಭಾಗವತ್, ಸಂಜೆ 7ರಿಂದ ಫ್ರೆಂಚ್ ಕ್ರಿಯೋಲ್ ಜಾಝ್ ಸಂಗೀತ ಪ್ರದರ್ಶನ, ಆಯೋಜನೆ ಹಾಗೂ ಸ್ಥಳ: ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ ಮ್ಯೂಸಿಯಂ, ಜೆ.ಪಿ.ನಗರ

ಶ್ರೀಪಾದರಾಜರ ಉತ್ತರಾರಾಧನಾ ಮಹೋತ್ಸವ: ಅಭಿಷೇಕ ಹಾಗೂ ಭಜನೆ, ‘ಶ್ರೀಪಾದರಾಜರ ಮಹಿಮಾ’
ಉಪನ್ಯಾಸ: ಕಲ್ಲಾಪುರ ಪವಮಾನಾಚಾರ್ಯ, ಆಯನೂರು ಮಧುಸೂಧನಾಚಾರ್ಯ, ಆಯೋಜನೆ ಹಾಗೂ ಸ್ಥಳ: ಕಾಕೋಳು ವೇಣುಗೋಪಾಲಸ್ವಾಮಿ ದೇವಸ್ಥಾನ ಟ್ರಸ್ಟ್, ಕಾಕೋಳು, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ ಸಮೀಪ, ಯಲಹಂಕ, ಬೆಳಿಗ್ಗೆ 8.30ರಿಂದ

12ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ: ಆಶೀರ್ವಚನ: ಸಿದ್ದಲಿಂಗ ಸ್ವಾಮೀಜಿ, ಪುಸ್ತಕ ವಿತರಣೆ: ತೇಜಸ್ವಿಸೂರ್ಯ, ಅಧ್ಯಕ್ಷತೆ: ಆರ್. ಅಶೋಕ್, ಪ್ರತಿಭಾ ಪುರಸ್ಕಾರ ವಿತರಣೆ: ಬಿ.ವೈ.ವಿಜಯೇಂದ್ರ, ಸುದೀಪ್, ಆಯೋಜನೆ: ರಕ್ಷಾ ಫೌಂಡೇಷನ್, ಸ್ಥಳ: ಚಂದ್ರಗುಪ್ತ ಮೌರ್ಯ ಆಟದ ಮೈದಾನ (ಶಾಲಿನಿ), ಜಯನಗರ 5ನೇ ಬ್ಲಾಕ್, ಬೆಳಿಗ್ಗೆ 10

ADVERTISEMENT

ಸಂಗಮೇಶ ಬಾದವಾಡಗಿ ಅವರ ‘ಕಾಡು, ಕಡಲಗಳ ನಾಡು ಅಂಡಮಾನ್’ ಪ್ರವಾಸ ಕಥನ, ‘ಗಾದೆ ಹಳೆಯದಾದರೇನು ಅರ್ಥ ನವನವೀನ’ ಗಾದೆಗಳ ಪ್ರಬಂಧ ಪುಸ್ತಕ ಬಿಡುಗಡೆ: ಕಾರ್ಯಕ್ರಮ ಉದ್ಘಾಟನೆ: ಜಗದೀಶ್ ಶೆಟ್ಟರ್, ಅಧ್ಯಕ್ಷತೆ: ಶಂಕರ ಬಿದರಿ, ಪುಸ್ತಕ ಬಿಡುಗಡೆ: ಧರಣಿದೇವಿ ಮಾಲಗತ್ತಿ, ಚೆನ್ನಪ್ಪ ಕಟ್ಟಿ, ಕೃತಿ ಬಗ್ಗೆ ಮಾತು: ಬಸವರಾಜ ಬಲ್ಲೂರು, ಆಯೋಜನೆ: ಡಾ.ಸಿದ್ದಯ್ಯ ಪುರಾಣಿಕ ರಾಷ್ಟ್ರೀಯ ಟ್ರಸ್ಟ್ ಕೊಪ್ಪಳ, ಸಂಗಮೇಶ ಬಾದವಾಡಗಿಯವರ ಹಿತೈಷಿಗಳ ಬಳಗ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ಸಂಸ್ಮರಣೋತ್ಸವ: ಸಾನ್ನಿಧ್ಯ: ಮಲ್ಲಿಕಾರ್ಜುನ ದೇವರು, ಉದ್ಘಾಟನೆ: ಚನ್ನಬಸವ ಸ್ವಾಮೀಜಿ, ಅಧ್ಯಕ್ಷತೆ: ಬಿ.ಎಸ್. ಪರಮಶಿವಯ್ಯ, ಸಂಸ್ಮರಣೆ: ಎಲ್. ರಾಜಪ್ಪ, ಎಚ್.ಎಸ್. ಶಿವಲಿಂಗಯ್ಯ, ಎಂ. ಶಿವಣ್ಣ, ಮಲ್ಲಿಕಾರ್ಜುನ, ಆಯೋಜನೆ: ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಬೆಳಿಗ್ಗೆ 11

ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ: ಮುಖ್ಯ ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಂ.ಸಿ. ಸುಧಾಕರ್, ಶರಣಪ್ರಕಾಶ್ ಆರ್. ಪಾಟೀಲ, ಮಧು ಬಂಗಾರಪ್ಪ, ಉಪಸ್ಥಿತಿ: ಪ್ರದೀಪ್ ಈಶ್ವರ್, ಆಯೋಜನೆ: ಪರಿಶ್ರಮ ಅಕಾಡೆಮಿ, ಸ್ಥಳ: ಪೂರ್ಣಿಮಾ ಪ್ಯಾಲೇಸ್, ಮೈಸೂರು ರಸ್ತೆ, ಬೆಳಿಗ್ಗೆ 11

‘ಪೇಜ್‌ ಟರ್ನರ್‌’– ಭಾರತೀಯ ಇಂಗ್ಲಿಷ್ ಸಾಹಿತ್ಯದಲ್ಲಿ ಯುವ ಸಾಹಿತ್ಯ–ಕುರಿತ ಚರ್ಚೆ ಮತ್ತು ಸಂವಾದ: ಅದಿತಿ ಮಲ್ಯ, ನಿಖಿಲ್ ಅಗರವಾಲ್, ಪೊಯ್ಲೆ ಸೆಂಗುಪ್ತ, ಕೀರ್ತನಾ, ಆಯೋಜನೆ ಹಾಗೂ ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 11.30

ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್ ರೇಂಜರ್ಸ್ ಮತ್ತು ರೋವರ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ: ಉದ್ಘಾಟನೆ: ಎಸ್.ಟಿ. ಸೋಮಶೇಖರ್, ಮುಖ್ಯ ಅತಿಥಿಗಳು: ಕಂಬದ ರಂಗಯ್ಯ, ಅನಿಲ್ ಕುಮಾರ್, ಅಧ್ಯಕ್ಷತೆ: ಲಕ್ಷ್ಮೀನಾರಾಯಣ ಎ.ವಿ., ಆಯೋಜನೆ ಹಾಗೂ ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆಂಗೇರಿ ಉಪನಗರ, ಬೆಳಿಗ್ಗೆ 10.30

ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ: ಪ್ರೊ.ಕೆ.ವಿ.ನಾಗರಾಜ್, ಪ್ರಶಸ್ತಿ ಪುರಸ್ಕೃತರು: ಎಂ. ನಾಗರಾಜ, ಮುಖ್ಯ ಅತಿಥಿಗಳು: ಎಸ್.ಆರ್. ಉಮಾಶಂಕರ್, ಬಿ.ಎಸ್. ಅರುಣ್, ವೂಡೇ ಪಿ. ಕೃಷ್ಣ, ಆಯೋಜನೆ: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಮೇಲುಕೋಟೆ, ಸ್ಥಳ: ಸಮ್ಮೇಳನ ಸಭಾಂಗಣ, ಶೇಷಾದ್ರಿಪುರ ಕಾಲೇಜು, ಬೆಳಿಗ್ಗೆ 10.30

ಪದವಿ ಪ್ರದಾನ ಸಮಾರಂಭ: ಮುಖ್ಯ ಅತಿಥಿ: ಎನ್.ಆರ್. ಭಾನುಮೂರ್ತಿ, ಗೌರವ ಅತಿಥಿ: ರಮೇಶ್ ಚಂದ್ರ ಲಹೋಟಿ, ಅಧ್ಯಕ್ಷತೆ: ಸೌಂದರ್ಯ ಪಿ. ಮಂಜಪ್ಪ, ಆಯೋಜನೆ ಹಾಗೂ ಸ್ಥಳ: ಸೌಂದರ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್, ಸೌಂದರ್ಯನಗರ, ಬೆಳಿಗ್ಗೆ 11

ಎಸ್.ಕೆ. ಪ್ರೇಮ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ದತ್ತಿ ಉಪನ್ಯಾಸ: ‘ತೆರೆಮರೆಯ ವಚನಕಾರ್ತಿ ಆಯ್ದಕ್ಕಿ ಲಕ್ಕಮ್ಮ’ ವಿಷಯದ ಬಗ್ಗೆ ಉಪನ್ಯಾಸ: ಪೂರ್ಣಿಮಾ ಎಸ್., ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5

ಅಂಬಿಗರ ಚೌಡಯ್ಯ ಮತ್ತು ಮಹಾಕವಿ ಹರಿಹರ ಜಯಂತಿ: ಉದ್ಘಾಟನೆ: ಎಸ್. ನಂದಕುಮಾರ್, ಉಪನ್ಯಾಸ: ಎಸ್. ಪಿನಾಕಪಾಣಿ, ಪ್ರಶಂಸನಾ ಪತ್ರ ಪ್ರದಾನ: ಪ್ರಶಾಂತ್ ಹೊಸಮಠ್, ಅಧ್ಯಕ್ಷತೆ: ಭ್ರಮರಾಂಬ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಬಸವ ಬೆಳಕು, ನಂ.533, 7ನೇ ಮುಖ್ಯ ರಸ್ತೆ, ಕಲ್ಯಾಣ ಗೃಹನಿರ್ಮಾಣ ಸಹಕಾರ ಸಂಘ ಬಡಾವಣೆ, ನಾಗದೇವನಹಳ್ಳಿ, ಸಂಜೆ 5

‘ಭಕ್ತಿಯೊಂದೇ ಮುಕ್ತಿ ಸಾಧನ’ ಭಕ್ತಿಗೀತೆಗಳ ಕಾರ್ಯಕ್ರಮ: ಮುಖ್ಯ ಅತಿಥಿಗಳು: ಸ್ನೇಹಲ್, ಲಕ್ಷ್ಮೀದೇವಿ, ಟಿ. ಯೋಗೇಶ, ಮಂಜುನಾಥ್ ಸ್ವಾಮಿ ಎಲ್., ಮಲ್ಲಿಕಾರ್ಜುನ್ ಸಂಶಿ, ಬಿ. ಸರೋಜಾದೇವಿ, ಗಿರಿಜಾ ಲೋಕೇಶ್, ಜ್ಯೋತ್ಸ್ನಾ ಶ್ರೀಕಾಂತ್, ಸುಧಾ ನರಸಿಂಹರಾಜು, ಗಾಯಕರು: ಗೋಪಿ, ಕೆ.ಎಸ್. ಸುರೇಖ, ಗಾಯತ್ರಿ ಮೋಹನ್, ಸಿ.ವಿ. ಶ್ರೀನಿವಾಸ್, ದತ್ತಪ್ರಸಾದ್ ಶಾಸ್ತ್ರಿ, ನಂಜಪ್ಪ, ಸ್ಥಳ: ತಿರುಪತಿ ತಿರುಮಲ ದೇವಸ್ಥಾನ ಸಭಾಂಗಣ, ಮಲ್ಲೇಶ್ವರ, ಸಂಜೆ 5.30

ಹರಿನಾಮ ಸಂಕೀರ್ತನೆ: ಭವಾನಿ ಎಂ. ರಾವ್, ವಾದ್ಯ ಸಹಕಾರ: ಎಂ. ಎನ್. ಸತ್ಯನಾರಾಯಣ, ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ‌ಸಂಜೆ 6.30

‘ಪಲ್ಸ್’ ನೃತ್ಯ ಪ್ರದರ್ಶನ: ಮುಖ್ಯ ಅತಿಥಿಗಳು: ದಿನೇಶ್ ಗುಂಡೂರಾವ್, ನವೀನ್ ಕುಮಾರ್ ತೇಜಸ್ವಿ, ಆಯೋಜನೆ: ಆರವ್ಸ್ ಡಾನ್ಸ್ ಅಕಾಡೆಮಿ, ಸ್ಥಳ: ಎಡಿಎ ರಂಗಮಂದಿರ, ಸಂಜೆ 6.30

ದೇವಿ ಸ್ತುತಿ ದೇಶಿ ವಾದ್ಯ ವೈಭವ ಜಾನಪದ ಝೇಂಕಾರ: ಮಧು ಮನೋಹರ್, ಕಾರ್ತಿಕ್ ಪಾಂಡವಪುರ ತಂಡ, ಮುಖ್ಯ ಅತಿಥಿಗಳು: ವಿನೋದ್ ಡಾಂಗೆ, ಎನ್. ಸುಧಾಕರ್, ಬಿ.ಕೆ. ಶಿವರಾಮ್, ಆಯೋಜನೆ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಬಯಲು ರಂಗಮಂದಿರ, ಕಾಡುಮಲ್ಲೇಶ್ವರ ದೇವಾಲಯ,
ಸಂಜೆ 6.30

‘Beg Borrow ಅಳಿಯ’ ಹಾಸ್ಯ ನಾಟಕ ಪ್ರದರ್ಶನ: ರಚನೆ: ಎಂ.ಎಸ್.ನರಸಿಂಹಮೂರ್ತಿ, ನಿರ್ದೇಶನ: ಹನು ರಾಮಸಂಜೀವ, ಆಯೋಜನೆ: ಪ್ರವರ ಥಿಯೇಟರ್, ಸ್ಥಳ: ಕೈವಲ್ಯ ಫೌಂಡೇಶನ್, ಭರತ್ ನಗರ 2ನೇ ಹಂತ, ಸಂಜೆ 7

‘ಭಕ್ತ ಸುಧನ್ವ’ ತಾಳಮದ್ದಳೆ ಪ್ರದರ್ಶನ: ಯಕ್ಷ ಕೌಮುದಿ ಟ್ರಸ್ಟ್ ಶ್ರೀರಂಗಪಟ್ಟಣ, ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಸಂಜೆ 7

ಭರತನಾಟ್ಯ ರಂಗಪ್ರವೇಶ: ಸುಷ್ಮಿತಾ ಎನ್. ಶೆಟ್ಟಿ, ಮುಖ್ಯ ಅತಿಥಿಗಳು: ಕೃಪಾ ಫಡ್ಕೆ, ಶುಭಾರಾಣಿ ಬೋಳಾರ್, ಆಯೋಜನೆ: ಲೀಲಾ ನಾಟ್ಯ ಕಲಾವೃಂದ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.