ADVERTISEMENT

ಬೆಂಗಳೂರು | ಎಂಜಿನಿಯರಿಂಗ್‌ ಕೆಲಸ; ತಡವಾಗಿ ಸಂಚರಿಸಲಿರುವ ರೈಲುಗಳು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 15:37 IST
Last Updated 21 ಆಗಸ್ಟ್ 2024, 15:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಎಂಜಿನಿಯರಿಂಗ್‌ ಕೆಲಸ ಹಮ್ಮಿಕೊಂಡಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಹೊರಡುವ ನಾಲ್ಕು ರೈಲುಗಳು ನಿಗಿದಿತ ಸಮಯಕ್ಕಿಂತ 15 ನಿಮಿಷ ತಡವಾಗಿ ಸಂಚರಿಸಲಿವೆ.

ಮಹಾರಾಷ್ಟ್ರದ ಭೂಸಾವಲ್‌ ವಿಭಾಗದಲ್ಲಿ ಪವರ್‌ ಬ್ಲಾಕ್‌ ಅಳವಡಿಕೆ ನಡೆಯಲಿರುವುದರಿಂದ ಸೆ.5ರಂದು ಮೈಸೂರು–ವಾರಾಣಸಿ ರೈಲು, ಸೆ.6 ಮತ್ತು 13ರಂದು ಹುಬ್ಬಳ್ಳಿ–ಬನಾರಸ್‌ ರೈಲು, ಸೆ.13ರಂದು ನವದೆಹಲಿ–ಕೆಎಸ್‌ಆರ್‌ ಬೆಂಗಳೂರು ರೈಲುಗಳು ತಲಾ 15 ನಿಮಿಷ ತಡವಾಗಿ ಸಂಚರಿಸಲಿವೆ.

ADVERTISEMENT

ಕಾಮಗಾರಿಗಾಗಿ ಭುವನೇಶ್ವರ ನಿಲ್ದಾಣದಲ್ಲಿ ನಿರ್ಬಂಧ ಇರುವ ಕಾರಣ ನಿಲ್ದಾಣ ಬೆಂಗಳೂರು ಎಸ್‌ಎಂವಿಟಿ–ಭುವನೇಶ್ವರ ಸೂಪರ್‌ಫಾಸ್ಟ್‌ ರೈಲು ಸೆ.2 ಮತ್ತು 5 ರಂದು 15 ನಿಮಿಷ ತಡವಾಗಿ ಸಂಚರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.