ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನೀಡುವ ‘ಆದಿಕವಿ’ ಪುರಸ್ಕಾರಕ್ಕೆ ವಿದ್ವಾಂಸ ವಿಷ್ಣು ಭಟ್ ಡೋಂಗ್ರೆ, ವಾಗ್ದೇವಿ ಪುರಸ್ಕಾರಕ್ಕೆ ಇತಿಹಾಸಕಾರ ಜಿ.ಬಿ. ಹರೀಶ್ ಆಯ್ಕೆಯಾಗಿದ್ದಾರೆ
ಪ್ರಶಸ್ತಿ ತಲಾ ₹ 1 ಲಕ್ಷ ನಗದು ಒಳಗೊಂಡಿದೆ. ವಿಷ್ಣು ಭಟ್ ಡೋಂಗ್ರೆ ಅವರು ದಕ್ಷಿಣ ಕನ್ನಡದ ಬೆಳ್ತಂಗಡಿಯ ಮುಂಡಾಜೆಯವರಾಗಿದ್ದಾರೆ. ಜಿ.ಬಿ.ಹರೀಶ್ ಅವರು ಹಾಸನದವ ರಾಗಿದ್ದಾರೆ. ಇಬ್ಬರೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹಲವು ಕೃತಿ ರಚಿಸಿದ್ದಾರೆ.
ಪುರಸ್ಕಾರ ಪ್ರದಾನ ಸಮಾರಂಭವು ನವೆಂಬರ್ 24 ರಂದು ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆಯಲಿದೆ ಎಂದು ಪರಿಷದ್ ಅಧ್ಯಕ್ಷ ನಾ. ಮೊಗಸಾಲೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.