ADVERTISEMENT

ಚಿತ್ರದುರ್ಗದಲ್ಲಿ ಏರ್ಪಡಿಸಿರುವ ಶೋಷಿತರ ಸಮಾವೇಶಕ್ಕೆ 20 ಕ್ವಿಂಟಲ್‌ ಲಾಡು

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 16:25 IST
Last Updated 27 ಜನವರಿ 2024, 16:25 IST
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಮುಖರು ಬೀದರ್‌ನಿಂದ ಚಿತ್ರದುರ್ಗಕ್ಕೆ ಲಾಡು ಕಳುಹಿಸಿಕೊಟ್ಟರು
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಮುಖರು ಬೀದರ್‌ನಿಂದ ಚಿತ್ರದುರ್ಗಕ್ಕೆ ಲಾಡು ಕಳುಹಿಸಿಕೊಟ್ಟರು   

ಬೀದರ್‌: ಚಿತ್ರದುರ್ಗದಲ್ಲಿ ಏರ್ಪಡಿಸಿರುವ ಶೋಷಿತರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ವಿತರಿಸಲು ನಗರದಿಂದ ಶನಿವಾರ 10 ಕ್ವಿಂಟಲ್‌ ಲಾಡು ಕಳುಹಿಸಿಕೊಡಲಾಗಿದೆ.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಅವರು ನಗರದಲ್ಲಿ 10 ಕ್ವಿಂಟಲ್‌ ಲಾಡು ಮಾಡಿಸಿ ಚಿತ್ರದುರ್ಗಕ್ಕೆ ಕಳಿಸಿಕೊಟ್ಟಿದ್ದಾರೆ. ಜೊತೆಗೆ ಚಿತ್ರದುರ್ಗದಲ್ಲಿಯೇ 10 ಕ್ವಿಂಟಲ್‌ ಲಾಡು ಮಾಡಿಸಿದ್ದಾರೆ. 20 ಕ್ವಿಂಟಲ್‌ ಲಾಡು ತಯಾರಿಸಲು ₹2.50 ಲಕ್ಷ ಖರ್ಚಾಗಿದೆ ಎಂದು ಮನ್ನಾನ್‌ ಸೇಠ್‌ ತಿಳಿಸಿದ್ದಾರೆ.

ಮುಖಂಡರಾದ ಬಸವರಾಜ ಮಾಳಗೆ, ನಾರಾಯಣ ಗಣೇಶ, ಬಾಬು ಪಾಸ್ವಾನ್, ಅಂಬಾದಾಸ ಗಾಯಕವಾಡ್, ಸುಭಾಷ್ ಟಿಳ್ಳೆಕರ್ ಇತರರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.