ADVERTISEMENT

ಔರಾದ್ | ಕೆಟ್ಟು ನಿಂತ ಟ್ರ್ಯಾಕ್ಟರ್‌ಗೆ ಡಿಕ್ಕಿ: ಶಿಕ್ಷಕ ಸಾವು

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 8:44 IST
Last Updated 29 ಜನವರಿ 2024, 8:44 IST
<div class="paragraphs"><p>ಬಾಬುರಾವ ಶಂಕರ</p></div>

ಬಾಬುರಾವ ಶಂಕರ

   

ಔರಾದ್: ಬೀದರ್-ನಾಂದೇಡ್ ಹೆದ್ದಾರಿ ವನಮಾರಪಳ್ಳಿ ಬಳಿ ಕೆಟ್ಟು ನಿಂತ ಟ್ರ್ಯಾಕ್ಟರ್ ಟ್ರ್ಯಾಲಿಗೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ.

ಮೃತ ಯುವಕ ಬಾಬುರಾವ ಶಂಕರ ವಾಘಮಾರೆ (42). ಖಾಸಗಿ ಶಾಲೆ ಶಿಕ್ಷಕರಾಗಿರುವ ಬಾಬುರಾವ ಭಾನುವಾರ ರಾತ್ರಿ ತಮ್ಮ ಊರು ವನಮಾರಪಳ್ಳಿಗೆ ಹೋಗುವಾಗ ಈ ಘಟನೆ ಸಂಭವಿಸಿದೆ.

ADVERTISEMENT

ಕತ್ತಲಲ್ಲಿ ಟ್ರ್ಯಾಕ್ಟರ್ ಟ್ರ್ಯಾಲಿ ನಿಂತಿದ್ದು ಕಾಣದೆ ಬೈಕ್ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಬಾಬುರಾವ ಅವರನ್ನು ಬೀದರ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.