ADVERTISEMENT

ಬೀದರ್‌: ಕೆಆರ್‌ಇ ಸಂಸ್ಥೆಯ ಅಧ್ಯಕ್ಷರಾಗಿ ಬಸವರಾಜ ಜಾಬಶೆಟ್ಟಿ ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 6:42 IST
Last Updated 22 ಅಕ್ಟೋಬರ್ 2024, 6:42 IST
ಬಸವರಾಜ ಜಾಬಶೆಟ್ಟಿ
ಬಸವರಾಜ ಜಾಬಶೆಟ್ಟಿ   

ಬೀದರ್‌: ಇಲ್ಲಿನ ಪ್ರತಿಷ್ಠಿತ ಕರ್ನಾಟಕ ರಾಷ್ಟ್ರೀಯ ಶಿಕ್ಷಣ (ಕೆಆರ್‌ಇ) ಸಂಸ್ಥೆಯ ಅಧ್ಯಕ್ಷರಾಗಿ ಬಸವರಾಜ ಜಾಬಶೆಟ್ಟಿ ಅವರು ಸತತ ಎರಡನೇ ಸಲ ಅವಿರೋಧವಾಗಿ ಪುನರಾಯ್ಕೆ ಆಗಿದ್ದಾರೆ.

ಭಾನುವಾರ (ಅ.20) ಸಂಸ್ಥೆಯ ಆಡಳಿತ ಮಂಡಳಿಗೆ ಚುನಾವಣೆ ನಡೆದಿತ್ತು. ಸಂಸ್ಥೆಯ ನ್ಯಾಸದ ಸದಸ್ಯರಾಗಿ ಡಾ. ಬಸವರಾಜ ಪಾಟೀಲ ಅಷ್ಟೂರ್‌, ಮಡಿವಾಳಪ್ಪ ಗಂಗಶೆಟ್ಟಿ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಬಿ.ಜಿ.ಶೆಟಕಾರ್‌, ಕಾರ್ಯದರ್ಶಿಯಾಗಿ ಸತೀಶ ಪಾಟೀಲ, ಜಂಟಿ ಕಾರ್ಯದರ್ಶಿಯಾಗಿ ಶಿವಾನಂದ ಗಾದಗೆ, ಸದಸ್ಯರಾಗಿ ಸಿದ್ದರಾಜ ಪಾಟೀಲ, ಧೂಳಪ್ಪ ಪಾಟೀಲ, ‌ಗುನ್ನಳ್ಳಿ ವಿಜಯಕುಮಾರ ಬಿರಾದಾರ, ರವಿ ಹಾಲಹಳ್ಳಿ, ನಾಗೂರೆ ಶ್ರೀನಾಥ, ಬುಯ್ಯ ವೀರಭದ್ರಪ್ಪ, ಹತ್ತಿ ಮಲ್ಲಿಕಾರ್ಜುನ, ಚಂದ್ರಕಾಂತ ಶೆಟಕಾರ್‌, ಚಂದಾ ಶಾಂತಕುಮಾರ್‌,  ವಿಕಾಸ ಗೋಯಲ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರೊ.‌ಎಸ್.ಎಸ್.ದೇವರಕಲ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.