ಔರಾದ್: ತಾಲ್ಲೂಕಿನ ಬೇಲೂರ(ಎನ್) ಗ್ರಾಮದ ರೈತ ಬಿಕ್ಕುಮಿಯ್ಯ ಅವರ ಮೇಲೆ ಕಾಡು ಹಂದಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.
ರೈತ ಬಿಕ್ಕುಮಿಯ್ಯಾ ಅವರು ಶನಿವಾರ ಸಂಜೆ ಹೊತ್ತು ಹೊಲಕ್ಕೆ ಹೋಗುವಾಗ ಏಕಾಏಕಿ ದಾಳಿ ಮಾಡಿದ ಕಾಡು ಹಂದಿ ಹೊಟ್ಟೆ, ತೊಡೆ ಭಾಗ ಗಾಯಗೊಳಿಸಿದೆ. ತೀವ್ರ ಗಾಯಗೊಂಡು ಕೂಗಾಡುತ್ತಿದ್ದ ವೇಳೆ ಪಕ್ಕದ ಹೊಲದ ಜನ ಬರುತ್ತಿದ್ದಂತೆ ಕಾಡು ಹಂದಿ ಅಲ್ಲಿಂದ ಓಡಿ ಹೋಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಾಡು ಹಂದಿ ದಾಳಿಯಿಂದ ಗಾಯಗೊಂಡ ರೈತ ಬಿಕ್ಕುಮಿಯ್ಯಾ ಅವರನ್ನು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಚಿಕಿತ್ಸೆ ವೆಚ್ಚ ಹಾಗೂ ಪರಿಹಾರ ಇಲಾಖೆ ಕೊಡುತ್ತದೆ ಎಂದು ವಲಯ ಅರಣ್ಯಾಧಿಕಾರಿ ಅಲಿಯೋದ್ದಿನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.