ADVERTISEMENT

ಮನವಿಗೆ ಸಿಎಂ ಕಚೇರಿ ಸ್ಪಂದನೆ: ಖಾನಾಪುರಗೆ ಬಸ್ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 16:22 IST
Last Updated 21 ಜೂನ್ 2024, 16:22 IST

ಔರಾದ್: ತಾಲ್ಲೂಕು ‌ಖಾನಾಪುರ (ಕೆ) ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಗ್ರಾಮಸ್ಥರೊಬ್ಬರು ಮುಖ್ಯಮಂತ್ರಿ ಕಚೇರಿಗೆ ಮಾಡಿಕೊಂಡ ಮನವಿಗೆ ಸ್ಪಂದನೆ ಸಿಕ್ಕಿದೆ.

ಖಾನಾಪುರ ಗ್ರಾಮದ ಸಿದ್ದು ಸ್ವಾಮಿ ಅವರು ಬಸ್ ವ್ಯವಸ್ಥೆ ಕಲ್ಪಿಸುವ‌ ಸಂಬಂಧ ಮುಖ್ಯಮಂತ್ರಿ ಕಚೇರಿ ಸಾಮಾಜಿಕ ಜಾಲ ತಾಣಕ್ಕೆ ದೂರು ಸಲ್ಲಿಸಿದ್ದರು. ಇದನ್ನು ಗಮನಿಸಿದ ಮುಖ್ಯಮಂತ್ರಿ ವಿಶೇಷ ಕರ್ತವ್ಯ ಅಧಿಕಾರಿಗಳು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬೀದರ್ ವಿಭಾಗೀಯ ನಿಯಂತ್ರಕರ ಗಮನಕ್ಕೆ ತಂದು‌ ಖಾನಾಪುರಗೆ ಬಸ್ ವ್ಯವಸ್ಥೆ ‌ಮಾಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT