ADVERTISEMENT

ಔರಾದ್: ಹಾವು ಕಡಿದು ರೈತ ಸಾವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:06 IST
Last Updated 20 ಜೂನ್ 2024, 7:06 IST
ಸೂರ್ಯಕಾಂತ ದೇವರೆ
ಸೂರ್ಯಕಾಂತ ದೇವರೆ   

ಔರಾದ್: ತಾಲ್ಲೂಕಿನ ಕೌಠಾ (ಬಿ) ಗ್ರಾಮದ ರೈತ ಸೂರ್ಯಕಾಂತ ಕಾಶಿನಾಥ ದೇವರೆ (45) ಹಾವು ಕಡಿದು ಬುಧವಾರ ಸಾವನ್ನಪ್ಪಿದರು.


ಸೂರ್ಯಕಾಂತ ಅವರು ಮಂಗಳವಾರ ಬೆಳಿಗ್ಗೆ ಹೊಲಕ್ಕೆ ಹೋದಾಗ ಕಾಲಿಗೆ ಹಾವು ಕಡಿದಿದೆ. ತಕ್ಷಣ ಊರಿಗೆ ಬಂದು ಮನೆಯವರ ಜತೆ ಬೀದರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಹೈದರಾಬಾದ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು ಆದರೆ ಅಲ್ಲಿಯೂ ಸ್ಪಂದಿಸದೆ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT