ADVERTISEMENT

ಹುಲಸೂರ: ಜೆಜೆಎಂ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 16:20 IST
Last Updated 11 ಫೆಬ್ರುವರಿ 2024, 16:20 IST
ಹುಲಸೂರ ತಾಲ್ಲೂಕಿನ ಕಾದೇಪುರ ಗ್ರಾಮದಲ್ಲಿ ಜಲ ಜೀವನ್ ‌ಮಿಷನ್ ಕಾಮಗಾರಿಗೆ ಶಾಸಕ ಶರಣು ಸಲಗರ ಮತ್ತು ಸ್ಥಳೀಯ ‌ಮುಖಂಡರು ಗುದ್ದಲಿ ಪೂಜೆ ನೆರವೇರಿಸಿದರು
ಹುಲಸೂರ ತಾಲ್ಲೂಕಿನ ಕಾದೇಪುರ ಗ್ರಾಮದಲ್ಲಿ ಜಲ ಜೀವನ್ ‌ಮಿಷನ್ ಕಾಮಗಾರಿಗೆ ಶಾಸಕ ಶರಣು ಸಲಗರ ಮತ್ತು ಸ್ಥಳೀಯ ‌ಮುಖಂಡರು ಗುದ್ದಲಿ ಪೂಜೆ ನೆರವೇರಿಸಿದರು   

ಹುಲಸೂರ: ತಾಲ್ಲೂಕಿನ ಗೋರಟಾ (ಬಿ) ಹಾಗೂ ಕಾದೇಪುರ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಒದಗಿಸುವ ಕಾರ್ಯಕ್ರಮಕ್ಕೆ ಶಾಸಕ ಶರಣು ಸಲಗರ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಶಾಸಕ ಶರಣು ಸಲಗರ ಮಾತನಾಡಿ, 2022-23ನೇ ಸಾಲಿನಲ್ಲಿ ಜೆಜೆಎಂ ಯೋಜನಯಡಿ ಗೋರಟಾ ಗ್ರಾಮದಲ್ಲಿ ₹ 1 ಕೋಟಿ 79 ಲಕ್ಷ ಹಾಗೂ ಕಾದೇಪುರ ಗ್ರಾಮದಲ್ಲಿ ₹ 1 ಕೋಟಿ 78 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲು ಅನುಮೋದನೆ ದೊರೆತಿದೆ. ಗೋರಟಾದ 835, ಕಾದೇಪುರ ಗ್ರಾಮದ 365 ಮನೆಗಳಿಗೆ ನಳಗಳ ಜೋಡಣೆ ಕಾಮಗಾರಿಗಳಿಗೂ ಕೆಲಸ ವೇಗವಾಗಿ ನಡೆಯುತ್ತಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸಲಾಗುವುದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕ ಮಹದೇವ ಜಮ್ಮು, ಮುಚಳಂಬ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂದೀಪ ಬಿರಾದಾರ, ಗೋರಟಾ ಪಿಡಿಒ ಸಿದ್ದಲಿಂಗ ಸೇರಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಸೇರಿ ಹಲವರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.