ADVERTISEMENT

ಕಾಲು ಬಾಯಿ ಜ್ವರ ಲಸಿಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 5:18 IST
Last Updated 22 ಅಕ್ಟೋಬರ್ 2024, 5:18 IST
ಬೀದರ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿದರು
ಬೀದರ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿದರು   

ಬೀದರ್‌: ರಾಷ್ಟ್ರೀಯ ಜಾನುವಾರು ನಿಯಂತ್ರಣ ಕಾರ್ಯಕ್ರಮದಡಿ ನಗರದ ಲಕ್ಷ್ಮಿಸತ್ಯನಾರಾಯಣ ಟ್ರಸ್ಟ್‌ ಗೋಶಾಲೆಯಲ್ಲಿ ಸೋಮವಾರ ನಡೆದ ಆರನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಚಾಲನೆ ನೀಡಿದರು.

ಗೋಮಾತೆಗೆ ಪೂಜೆ ಸಲ್ಲಿಸಿ, ಲಸಿಕೆ ಹಾಕಿದ ಶಿಲ್ಪಾ ಶರ್ಮಾ, ಜಿಲ್ಲೆಯಾದ್ಯಂತ ರೈತರ ಮನೆ ಬಾಗಿಲಿಗೆ ಲಸಿಕೆದಾರರು ಹೋಗಿ, ದನ, ಎಮ್ಮೆಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡುತ್ತಾರೆ. ರೈತರು ಎಲ್ಲ ಜಾನುವಾರುಗಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸಿಕೊಂಡು ರೋಗ ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಾಲಿ ಕ್ಲಿನಿಕ್‌ ಉಪನಿರ್ದೇಶಕ ಡಾ.ರವೀಂದ್ರಕುಮಾರ ಭೂರೆ, ಬೀದರ್‌ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಉದಯಕುಮಾರ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ನರಸಪ್ಪ ಎ.ಡಿ., ಗೋಶಾಲೆ ಅಧ್ಯಕ್ಷ ಪ್ರಭುಶೆಟ್ಟಿ ಮೈಲಾಪೂರೆ, ನರಸಿಂಹ ದೀಕ್ಷಿತ್‌, ಪಶು ಪಾಲನಾ ಇಲಾಖೆಯ ಹಿರಿಯ ಅಧಿಕಾರಿ ಡಾ.ನಾಗರಾಜ, ಡಾ.ನೀಲಕಂಠ ಚನ್ನಶೆಟ್ಟಿ, ಡಾ.ಶ್ರೀಕಾಂತ ಬಿರಾದಾರ, ಡಾ.ಸಂಗಮೇಶ, ಡಾ.ಜಗದೀಶ, ಉಮೇಶ ಸಿರ್ಸೆ, ಜಾನುವಾರು ಅಭಿವೃದ್ದಿ ಅಧಿಕಾರಿ ವಿಠಲ್, ಜಗನ್ನಾಥ, ಸಂಗಪ್ಪ ಪಾಟೀಲ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.