ADVERTISEMENT

ಜಿಂಕೆ, ಕೃಷ್ಣಮೃಗ ಆವಾಸಸ್ಥಾನದಲ್ಲಿ ಗಣಿಗಾರಿಕೆ: ಟಿಲ್ಲರ್‌ ಜಪ್ತಿ, ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 9:39 IST
Last Updated 25 ಸೆಪ್ಟೆಂಬರ್ 2024, 9:39 IST
<div class="paragraphs"><p>ವಶಪಡಿಸಿಕೊಂಡ ಟಿಲ್ಲರ್‌</p></div>

ವಶಪಡಿಸಿಕೊಂಡ ಟಿಲ್ಲರ್‌

   

– ಪ್ರಜಾವಾಣಿ ಚಿತ್ರ

ಬೀದರ್‌: ತಾಲ್ಲೂಕಿನ ಬೆಳ್ಳೂರು ಸಮೀಪ ಕೈಗೊಂಡಿದ್ದ ಕೆಂಪು ಕಲ್ಲು ಗಣಿಗಾರಿಕೆಯನ್ನು ಗಣಿ ಇಲಾಖೆ ತಡೆದಿದೆ.

ADVERTISEMENT

ಗಣಿಗಾರಿಕೆಗೆ ಬಳಸುತ್ತಿದ್ದ ಟಿಲ್ಲರ್‌ ಮಶೀನ್‌ಗಳನ್ನು ಜಪ್ತಿ ಮಾಡಿ, ನಗರದ ಗಾಂಧಿ ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಗಣಿ ಇಲಾಖೆಯ ಅಧಿಕಾರಿಗಳು ಗಣಿಗಾರಿಕೆ ನಿಲ್ಲಿಸಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ನಿರ್ಮಾಣಗೊಂಡಿದ್ದ ಕಂದಕಗಳನ್ನು ಜೆಸಿಬಿ ಸಹಾಯದಿಂದ ಮಣ್ಣು ಹಾಕಿ ಸಮತಟ್ಟುಗೊಳಿಸಲಾಗಿದೆ’ ಎಂದು ಡಿಎಫ್‌ಒ ವಾನತಿ ಎಂ.ಎಂ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಜಿಂಕೆ, ಕೃಷ್ಣಮೃಗ ಆವಾಸ ಸ್ಥಾನದಲ್ಲಿ ಗಣಿಗಾರಿಕೆ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಬುಧವಾರ (ಸೆ. 25) ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಅರಣ್ಯ ಇಲಾಖೆ ಹಾಗೂ ಗಣಿ ಇಲಾಖೆ ಕ್ರಮ ಕೈಗೊಂಡಿವೆ.

ಬೆಳ್ಳೂರು ಗ್ರಾಮವು ಚಿಟ್ಟಾ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯ ಜಿಂಕೆ, ಕೃಷ್ಣಮೃಗಗಳಿವೆ. ಕೆಂಪು ಕಲ್ಲು ಗಣಿಗಾರಿಕೆಯಿಂದ ಅವುಗಳ ಚಲನವಲನದ ಮೇಲೆ ಪರಿಣಾಮ ಬೀರಿತ್ತು. ಆವಾಸಸ್ಥಾನ ನಾಶವಾಗುವ ಆತಂಕ ಮೂಡಿತ್ತು. ಇದಕ್ಕೆ ಪರಿಸರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.