ಖಟಕಚಿಂಚೋಳಿ: ರುದನೂರ ಗ್ರಾಮದ ಕಮರಿಮಠಕ್ಕೆ ಸೋಮವಾರ ಸಂಸದ ಸಾಗರ ಖಂಡ್ರೆ ಭೇಟಿ ನೀಡಿ ದೇವಾನಂದ ಸ್ವಾಮೀಜಿ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಅವರು,' ಜಿಲ್ಲೆಯ ಜನ ನನ್ನ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅವರ ಆಶಯಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತೇನೆ' ಎಂದು ತಿಳಿಸಿದರು.
ಪ್ರಮುಖರಾದ ಶಿವರಾಜ ಪಾಟೀಲ, ಸೋಮನಾಥ ಪಟ್ನೆ, ರಾಜು ಸ್ವಾಮಿ, ಬಸವರಾಜ ಬುಯ್ಯಾ, ರಾಜಕುಮಾರ ಖ್ಯಾಮಾ, ದೇವೆಂದ್ರಪ್ಪ ಚಾಕೂರೆ, ಬಸವರಾಜ ಹಾಲಹಳ್ಳಿ ರವೀಂದ್ರ ಬೀರಗೆ, ಸಚಿನ ಬ್ಯಾಲಹಳ್ಳೆ, ಅಮರ ಬುಯ್ಯಾ, ಬಾಬುರಾವ್ ಸ್ವಾಮಿ, ಸದಾನಂದ, ನಿಖಿಲ, ಧನರಾಜ, ಶಿವಕುಮಾರ ಹಾಲಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.