ADVERTISEMENT

ಮಳೆ: ಮಾವು, ಪಪ್ಪಾಯಿ ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 15 ಮೇ 2024, 14:39 IST
Last Updated 15 ಮೇ 2024, 14:39 IST

ಜನವಾಡ: ಬೀದರ್ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಮಾವು ಹಾಗೂ ಪಪ್ಪಾಯಿ ಬೆಳೆಗೆ ಹಾನಿ ಉಂಟಾಗಿದೆ.

ಚಿಟ್ಟಾವಾಡಿ ಹಾಗೂ ಚಿಟ್ಟಾ ಗ್ರಾಮಗಳಲ್ಲಿ ಹಸಿ ಮಾವಿನ ಕಾಯಿಗಳು ನೆಲಕ್ಕುರುಳಿವೆ. ಪಪ್ಪಾಯಿ ಗಿಡಗಳು ಮುರಿದು ಬಿದ್ದಿವೆ.ಬಿರುಗಾಳಿ ಸಹಿತ ಮಳೆಯಿಂದ ತಮ್ಮ ಹೊಲದಲ್ಲಿನ 60 ಪಪ್ಪಾಯಿ ಗಿಡಗಳು ಮುರಿದಿವೆ. 200 ಗಿಡಗಳ ಮಾವಿನ ಕಾಯಿಗಳು ನೆಲಕ್ಕೆ ಬಿದ್ದಿವೆ. ಅಂದಾಜು ₹ 1.70 ಲಕ್ಷ ನಷ್ಟವಾಗಿದೆ ಎಂದು ಚಿಟ್ಟಾ ಗ್ರಾಮದ ರೈತ ಜಾಫರ್‌ ಮಿಯಾ ತಿಳಿಸಿದರು.

ಮಳೆಯಿಂದಾಗಿ ಮಾವಿನ ಗಿಡಗಳ ಶೇ 40 ರಷ್ಟು ಕಾಯಿಗಳು ನೆಲಕ್ಕೆ ಉರುಳಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಚಿಟ್ಟಾವಾಡಿಯ ದಶರಥ ಮೊರಗೆ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.