ಹುಲಸೂರ: ಸಮೀಪದ ಮೆಹಕರ ಗ್ರಾಮ ಪಂಚಾಯಿತಿಯ ಕಳುವಾಗಿದ್ದ ಕಸ ವಿಲೇವಾರಿ ವಾಹನವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಗ್ರಾಮದ ಪಂಚಾಯಿತಿ ಕಟ್ಟಡದ ನಿಲ್ಲಿಸಿದ್ದ ₹4.50 ಮೌಲ್ಯದ ತ್ಯಾಜ್ಯ ವಿಲೇವಾರಿ ವಾಹನ ಈಚೆಗೆ ಕಳುವಾಗಿದೆ ಎಂದು ಪಿಡಿಒ ಗಣೇಶ ಮೆಹಕರ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮೆಹಕರ್ ಸಮೀಪದ ಹಲಸಿ ತುಗಾಂವ ಗ್ರಾಮದ ಮುಖ್ಯರಸ್ತೆಯಲ್ಲಿ ನಸುಕಿನಜಾವ ಕಸವಿಲೇವಾರಿ ವಾಹನ ಬಿಟ್ಟು ಹೋಗಿದ್ದರು. ಆದಷ್ಟು ಬೇಗ ಕಳ್ಳರನ್ನು ಪತ್ತೆಹಚ್ಚಲಾಗುವುದು ಎಂದು ಪಿಎಸ್ಐ ಶಿವಕುಮಾರ ಬಳತೆ ಹಾಗೂ ಮಾಣಿಕಪ್ಪ ಹಲಮಡಗೆ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.